Friday, July 11, 2025
spot_imgspot_img
spot_imgspot_img

ಮೈಸೂರು ದಸರಾ: ಗಜಪಯಣಕ್ಕೆ ಭರದ ಸಿದ್ಧತೆ; ಗಜಪಡೆ ಕಾಡಿನಿಂದ ನಾಡಿಗೆ..!

- Advertisement -
- Advertisement -

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ವಾರಗಳು ಬಾಕಿಯಿದೆ. ದಸರಾದ ಮೊದಲ ಕಾರ್ಯಕ್ರಮ ಗಜ ಪಯಣಕ್ಕೆ ಸಿದ್ಧತೆಯನ್ನು ಆರಂಭಿಸಲಾಗಿದ್ದು ಈ ಬಾರಿಯೂ ಕೋವಿಡ್ ನಿಯಾಮಾನುಸಾರ ದಸರೆ ನಡೆಯಲಿದೆ. ಇಂದು ದಸರಾ ಗಜಪಡೆಗೆ ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಪೂಜೆ ನಡೆಸಲಾಗುತ್ತದೆ.

ವಿವಿಧ ಶಿಬಿರಗಳಿಂದ ಆನೆಗಳು ವೀರನಹೊಸಹಳ್ಳಿಗೆ ಆಗಮಿಸಲಿದೆ. ಮಾವುತ, ಕಾವಾಡಿಗಳ ಕುಟುಂಬವು ಆಗಮಿಸಲಿದೆ. ಆನೆಗಳ ಸ್ವಾಗತಕ್ಕೆ ಅರಣ್ಯಾಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು, ದಸರಾಗೆ ಆಯ್ಕೆಯಾಗಿರುವ ಆನೆಗಳಿಗೆ ಜಿಲ್ಲಾಡಳಿತ ವಿಶೇಷ ಪೂಜೆ ಸಲ್ಲಿಸಲಿದೆ.

ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಇಂದು ಸಂಜೆ ವೇಳೆಗೆ ಗಜಪಡೆ ಕಾಡಿನಿಂದ ನಾಡಿಗೆ ಬರಲಿದೆ. ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಅಭಿಮನ್ಯು ತಂಡ ಬೀಡುಬಿಡಲಿವೆ. ನಗರದ ವಾತಾವರಣಕ್ಕೆ ಮುರ್ನಾಲ್ಕು ದಿನ ಹೊಂದಿಕೊಂಡ ನಂತರ ಅರಮನೆ ಪ್ರವೇಶವಾಗಲಿದೆ.

- Advertisement -

Related news

error: Content is protected !!