- Advertisement -
- Advertisement -
ಮಾಣಿ : ಮಾಣಿ ಸಂತೆ ಮಾರುಕಟ್ಟೆ ಬಳಿ ಬೆಳಿಗ್ಗೆ ತನ್ನ ವಾಹನ ನಿಲ್ಲಿಸಿ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ವಾಪಸಾಗುವಾಗ ಸಂತೆ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಮೋಟಾರು ಸೈಕಲ್ನ್ನು ಕಳವಾದ ಘಟನೆ ನಡೆದಿದೆ.
ಕಡೆಶಿವಾಲಯದ ಪೆರ್ಲಾಪು ಚಿನ್ನಯ್ಯ ಕಟ್ಟೆ ಮನೆ ನಿವಾಸಿ ಮನೀಶ್ ಆಚಾರ್ಯ ತನ್ನ ನಂಬ್ರ KA-03-HH-8001 ದ್ವಿಚಕ್ರವಾಹನವನ್ನು ಮಾಣಿ ಸಂತೆಕಟ್ಟೆ ಬಳಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು ಮನೆಗೆ ವಾಪಾಸಾಗುವ ವೇಳೆ ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -