Friday, May 3, 2024
spot_imgspot_img
spot_imgspot_img

ಮಿತ್ತೂರು: ಮಾ. 12 ರಂದು ಹಿಂ.ಜಾ.ವೇ ಮತ್ತು ವಿ.ಹಿಂ.ಪ ಬಜರಂಗದಳ ಇದರ ವತಿಯಿಂದ ಪ್ರತಿಭಟನೆ ಮತ್ತು ಹಿಂದೂ ಜನಜಾಗೃತಿ ಸಭೆ

- Advertisement -G L Acharya panikkar
- Advertisement -

ಮಿತ್ತೂರು: ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್, ಬಜರಂಗದಳ ಇದರ ವತಿಯಿಂದ ಆದಿತ್ಯವಾರ 12/03/2023 ರ ಸಂಜೆ ಗಂಟೆ 3 ಕ್ಕೆ ಮಿತ್ತೂರಿನ ಸೊಸೈಟಿ ಮುಂಭಾಗ ಪ್ರತಿಭಟನೆ ಮತ್ತು ಹಿಂದೂ ಜನ ಜಾಗೃತಿ ಸಭೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ನಡೆಯುತ್ತಿರುವ ನಿರಂತರ ಗೋ ಕಳ್ಳತನ ಹಾಗೂ ಅನ್ಯ ಮತೀಯರ ಉಗ್ರ ಚಟುವಟಿಕೆಗಳು ನಡೆಯುತ್ತಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ಹಿಂದೂ ಸಮಾಜಕ್ಕೆ ತಿಳಿಸುವ ಹಾಗೂ ಅನ್ಯರಿಗೆ ಎಚ್ಚರಿಕೆಯ ಸಂದೇಶ ನೀಡುವ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮತ್ತು ಪ್ರಾಂತ ಮಾತೃ ಸುರಕ್ಷಾ ಸಂಯೋಜಕ್ ಗಣಪತಿ ಭಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂಧವರು ಸೇರಬೇಕೆಂದು ಆಯೋಜಕರು ತಿಳಿಸಿದ್ದಾರೆ.

- Advertisement -

Related news

error: Content is protected !!