Friday, April 26, 2024
spot_imgspot_img
spot_imgspot_img

ಮೀನು ವ್ಯಾಪಾರಿ ಸಾವು ಪ್ರಕರಣಕ್ಕೆ ಟ್ವಿಸ್ಟ್‌; ಪೊಲೀಸ್‌ ತನಿಖೆಯಲ್ಲಿ ಬಯಲಾಯಿತು ಅಸಲಿ ಸತ್ಯ

- Advertisement -G L Acharya panikkar
- Advertisement -

ಕೊಡಗು: ಮೀನು ವ್ಯಾಪಾರಿ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಪಘಾತವಾಗಿದ್ದ ತಾಸಿರ್ ಮನೆಯವರೆಲ್ಲಾ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರೆ ಎಂದು ಕೊಂಡಿದ್ದರು. ಆದರೆ ಸಿಸಿ ಕ್ಯಾಮೆರಾ ಸತ್ಯವನ್ನು ಬಯಲು ಮಾಡಿತ್ತು.

ಡಿಸೆಂಬರ್ 10 ರ ರಾತ್ರಿ ಕಾರೊಂದು ಹಿಂದಿನಿಂದ ಬಂದು ಮಹಮ್ಮದ್ ತಾಸಿರ್ ಎಂಬಾತನಿಗೆ ಢಿಕ್ಕಿ ಹೊಡೆದಿತ್ತು. ಈ ಕುರಿತ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಅದು ಅಪಘಾತವಲ್ಲ, ಕೊಲೆ ಎನ್ನುವ ರಹಸ್ಯ ಬಯಲಾಗಿತ್ತು.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ನೌಷದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೌಷಾದ್ ಗೆ ಮೃತಪಟ್ಟ ಮೀನು ವ್ಯಾಪಾರಿ ಮಹಮ್ಮದ್ ತಾಸಿರ್ ಜೊತೆ ದ್ವೇಷ ಇತ್ತು ಎನ್ನಲಾಗಿದೆ.ಇದರಿಂದಾಗಿ ಉದ್ದೇಶಪೂರ್ವಕವಾಗಿ ಅಪಘಾತ ನಡೆಸಿ ಕೊಲೆ ಮಾಡಿದ್ದಾನೆ ಎನ್ನುವುದು ಬಯಲಾಗಿದೆ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!