Thursday, March 28, 2024
spot_imgspot_img
spot_imgspot_img

ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲದೆ ಸಿಂಪಲ್ ಮನೆಮದ್ದುಗಳು

- Advertisement -G L Acharya panikkar
- Advertisement -

ಹೆಣ್ಣೆಂದರೆ ಸೌಂದರ್ಯ, ಹೀಗಾಗಿಯೇ ಹಲವಾರು ಕವಿಗಳು ಕೂಡ ಹೆಣ್ಣಿನ ಬಗ್ಗೆ ವರ್ಣನೆ ಮಾಡಿರುವರು. ಹಿಂದಿನಿಂದಲೂ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಕಾಪಿಡಲು ವಿವಿಧ ರೀತಿಯಿಂದ ಪ್ರಯತ್ನ ಮಾಡುತ್ತಿದ್ದರು. ಯಾಕೆಂದರೆ ಸೌಂದರ್ಯವಿದ್ದರೆ ಆಗ ಗುಂಪಿನಲ್ಲಿ ಎದ್ದು ಕಾಣಬಹುದಾಗಿದೆ.

ಇಂತಹ ಸೌಂದರ್ಯ ಪಡೆಯಲು ಆಯುರ್ವೇದದ ನೆರವನ್ನು ಹಿಂದಿನವರು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ತಕ್ಷಣವೇ ಎಲ್ಲವೂ ಸಿಗಬೇಕಾಗಿರುವ ಕಾರಣದಿಂದಾಗಿ ಹೆಚ್ಚು ಸಮಯ ಕಾದು ಫಲಿತಾಂಶ ನೋಡುವಂತಹ ವ್ಯವದಾನವು ಯಾರಲ್ಲಿಯೂ ಇಲ್ಲ. ಹೀಗಾಗಿ ರೆಡಿಮೇಡ್ ಉತ್ಪನ್ನಗಳಿಗೆ ಮಾರು ಹೋಗುವುದು ಹೆಚ್ಚಾಗುತ್ತಿದೆ.

ಇದು ತಕ್ಷಣಕ್ಕೆ ಕಾಂತಿ ನೀಡಿದರೂ ಬಳಿಕ ಹಲವಾರು ಸಮಸ್ಯೆಗಳನ್ನು ಉಂಟು ಮಾಡುವುದು. ಹೀಗಾಗಿ ಆಯುರ್ವೇದವು ಸ್ವಲ್ಪ ನಿಧಾನವಾಗಿ ಫಲಿತಾಂಶ ನೀಡಿದರೂ ಅದರ ಪರಿಣಾಮ ಮಾತ್ರ ಶಾಶ್ವತ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮವನ್ನು ಅದು ಉಂಟು ಮಾಡುವುದಿಲ್ಲ. ಈ ಲೇಖನದಲ್ಲಿ ಮಹಿಳೆಯ ತ್ವಚೆಯ ಸೌಂದರ್ಯಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ಹೇಗೆ ಬಳಸಿಕೊಳ್ಳುವುದು ಎಂದು ತಿಳಿಯುವ.

ಹಸಿ ಹಾಲಿನಿಂದ ಶುದ್ಧೀಕರಣ

ಹಿಂದೆ ರಾಜಮಹಾರಾಜರ ಹಾಗೂ ಕೆಲವೊಂದು ಋಷಿಗಳ ಪತ್ನಿಯರು ಮೊದಲು ಹಾಲಿನಲ್ಲಿ ತ್ವಚೆ ಸ್ವಚ್ಛಗೊಳಿಸಿದ ಬಳಿಕ ಗುಲಾಬಿ ನೀರಿನಲ್ಲಿ ಹೋಗಿ ಸ್ನಾನ ಮಾಡಿಕೊಳ್ಳುತ್ತಿದ್ದರು ಎಂದು ಪುರಾಣಗಳು ಕೂಡ ಹೇಳಿವೆ. ಋಷಿ ಬೃಹಸ್ಪತಿ ಅವರ ಪತ್ನಿ ತಾರಾ ಕೂಡ ಇದೇ ರೀತಿಯಾಗಿ ಸ್ನಾನ ಮಾಡುತ್ತಿದ್ದರು.
ಇದರಿಂದ ಚಂದ್ರ ದೇವರು ಅವರ ಸೌಂದರ್ಯಕ್ಕೆ ಮಾರು ಹೋದರು ಎಂದು ಪುರಾಣಗಳು ಹೇಳುತ್ತವೆ. ಹಸಿ ಹಾಲಿನಲ್ಲಿ ಹತ್ತಿ ಉಂಡೆ ಮುಳುಗಿಸಿ ಮತ್ತು ಪ್ರತಿನಿತ್ಯ ನಿಮ್ಮ ಮುಖವನ್ನು ಅದರಿಂದ ಒರೆಸಿರಿ. ಇದರಿಂದ ಮುಖದ ಮೇಲೆ ಕೊಳೆಯು ತೆಗೆದುಹಾಕಲ್ಪಡುವುದು ಮತ್ತು ಶುದ್ಧ ಚರ್ಮವನ್ನು ಇದು ನೀಡುವುದು.

ಬೇವಿನ ಎಲೆಗಳು

ಬೇವಿನ ಎಲೆಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಬೇವು ಕಹಿಯಾದರೂ ಇದರಲ್ಲಿನ ಔಷಧೀಯ ಗುಣಗಳು ಅಪಾರ. ಹೀಗಾಗಿ ಇದನ್ನು ಹಿಂದಿನಿಂದಲೂ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಸೌಂದರ್ಯ ವೃದ್ಧಿಸಲು ಹೊರಗಿನಿಂದ ಹಚ್ಚಿಕೊಳ್ಳಬಹುದು.

ತ್ವಚೆಯ ಆರೈಕೆಯಲ್ಲಿ ಎಷ್ಟೇ ಮಟ್ಟದಲ್ಲಿ ನೀವು ಶಿಸ್ತನ್ನು ಪಾಲಿಸಿದರೂ ಆಹಾರ ಕ್ರಮದಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ ಆಗ ಖಂಡಿತವಾಗಿಯೂ ಅದು ನಿಮ್ಮ ತ್ವಚೆ ಮೇಲೆ ಪರಿಣಾಮ ಬೀರುವುದು.

ಬೇವಿನ ಎಲೆಗಳು ಚರ್ಮದ ರಂಧ್ರಗಳಲ್ಲಿನ ವಿಷವನ್ನು ಹೊರಗೆ ಹಾಕುವುದು. ಬೇವಿನ ಎಲೆಗಳನ್ನು ಕುದಿಸಿಕೊಂಡು ಅದರ ಹಬೆ ಪಡೆಯಿರಿ. ಇದರ ಬಳಿಕ ನೈಸರ್ಗಿಕ ಫೇಸ್ ಪ್ಯಾಕ್ ಬಳಸಿ.

ನೈಸರ್ಗಿಕ ಫೇಸ್ ಪ್ಯಾಕ್

ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಉತ್ಪನ್ನಗಳ ಬಳಕೆಯಿಂದ ನಿಮ್ಮ ತ್ವಚೆಗೆ ಎಷ್ಟು ಫಲಿತಾಂಶ ಸಿಗುವುದೋ ಅಷ್ಟೇ ಫಲಿತಾಂಶವು ಮನೆಮದ್ದುಗಳಿಂದಲೂ ಸಿಗುವುದು. ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಿಕೊಂಡರೆ ತುಂಬಾ ಒಳ್ಳೆಯದು.

ಜೀರಿಗೆ ರುಬ್ಬಿಕೊಂಡು ಅದರ ಪೇಸ್ಟ್ ಮಾಡಿ. ಇದಕ್ಕೆ ಅರಶಿನ ಹುಡಿ ಮತ್ತು ಶ್ರೀಗಂಧದ ಹುಡಿ ಹಾಕಿಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆ ಮಾಡಲು ಮೊಟ್ಟೆಯ ಬಿಳಿ ಲೋಳೆ ಬಳಸಬಹುದು. ಕಡಲೆ ಹಿಟ್ಟು ಮತ್ತು ಅರಶಿನದ ಫೇಸ್ ಪ್ಯಾಕ್ ನ್ನು ಹೆಚ್ಚಿನ ಭಾರತೀಯರು ಬಳಸಿಕೊಳ್ಳುವರು.

ಆಹಾರ ಮತ್ತು ತ್ವಚೆ

ತ್ವಚೆಯ ಆರೈಕೆಗೆ ನೀವು ಎಷ್ಟೇ ಪ್ರಯತ್ನ ಮಾಡಿದರೂ ದೇಹಕ್ಕೆ ಸರಿಯಾದ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಸಿಗದೆ ಇದ್ದರೆ ಆಗ ತ್ವಚೆಯು ನಿಸ್ತೇಜವಾಗಿ ಕಾಣಿಸುವುದು.
ಸಿಟ್ರಸ್ ಹಣ್ಣುಗಳನ್ನು ಆದಷ್ಟು ಸೇವಿಸಿ. ಕಿತ್ತಳೆ ಮತ್ತು ಲಿಂಬೆಯ ರಸವನ್ನು ನೀವು ಮುಖಕ್ಕೆ ಹೆಚ್ಚಿಕೊಂಡರೆ ಆಗ ವಿಟಮಿನ್ ಸಿ ತ್ವಚೆಗೆ ಕಾಂತಿ ನೀಡುವುದು. ವಿಟಮಿನ್ ಸಿ ಪಡೆಯಲು ನೀವು ಬಟಾಟೆ ತುಂಡುಗಳನ್ನು ಮುಖದ ಮೇಲೆ ಇಟ್ಟುಕೊಳ್ಳಬಹುದು.

ಫೇಶಿಯಲ್ ಎಣ್ಣೆಗಳನ್ನು ಬಳಸಿ

ತ್ವಚೆಯ ಸೌಂದರ್ಯದ ಕ್ರೀಮ್ ಗಳು ನೀಡುವಂತಹ ಜಾಹೀರಾತುಗಳನ್ನು ನಂಬಿಕೊಂಡು ಅದರ ಹಿಂದೆ ಹೋಗಬೇಡಿ. ಯಾಕೆಂದರೆ ಇದು ತುಂಬಾ ದುಬಾರಿ ಮತ್ತು ನಿಮ್ಮ ಬಜೆಟ್ ನ ಮೇಲೆ ಪರಿಣಾಮ ಬೀರಬಹುದು.
ಮಲಗುವ ಮೊದಲು ಆಲಿವ್ ತೈಲ ಹಚ್ಚಿಕೊಳ್ಳಿ. ಇದರಿಂದ ಅಕಾಲಿಕ ನೆರಿಗೆ ಮತ್ತು ಕಪ್ಪು ಕಲೆಗಳ ಸಮಸ್ಯೆ ನಿವಾರಣೆ ಮಾಡಬಹುದು. ಸೂಕ್ಷ್ಮ ಭಾಗಗಳಿಗೆ ತೆಂಗಿನೆಣ್ಣೆ ಬಳಸಬಹುದು. ಎಣ್ಣೆಯುಕ್ತ ಚರ್ಮಕ್ಕೆ ಚಾ ಮರದ ಎಣ್ಣೆಯು ತುಂಬಾ ಉಪಯುಕ್ತ.

ತೆಂಗಿನೆಣ್ಣೆ ಮತ್ತು ಬೀಟ್ ರೂಟ್ ಜ್ಯೂಸ್ ಬಳಸಿಕೊಂಡರೆ ಆಗ ತುಟಿಗಳು ನೈಸರ್ಗಿಕವಾಗಿ ಕೆಂಪಾಗಿರುವುದು. ಅಂಜೂರವನ್ನು ಕೂಡ ವಯಸ್ಸಾಗುವ ಲಕ್ಷಣ ತಡೆಯಲು ಬಳಸಬಹುದು. ತಲೆಹೊಟ್ಟು ನಿವಾರಣೆ ಮಾಡಲು ನೀವು ಬಾದಾಮಿ ಎಣ್ಣೆ ಬಳಸಿಕೊಳ್ಳಿ.

ಅರಿಶಿನ

ದೇಹದಲ್ಲಿನ ಅನಾರೋಗ್ಯವು ಯಾವಾಗಲೂ ಚರ್ಮದಲ್ಲಿ ಕಾಣಿಸುವುದು. ಹೀಗಾಗಿ ಜೀರ್ಣಕ್ರಿಯೆ ಮತ್ತು ಕರುಳಿನ ಕ್ರಿಯೆಗಳು ಸರಾಗವಾಗಿದ್ದರೆ ಆಗ ತ್ವಚೆಯಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುವುದಿಲ್ಲ.
ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯವೂ ನೀವು ಒಂದು ತುಂಡು ಅರಿಶಿನ ಜಗಿಯಿರಿ. ಇದು ದೇಹವನ್ನು ಶುದ್ಧೀಕರಿಸುವುದು. ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಇದು ಹೊರಗೆ ಹಾಕುವುದು. ಇದರಿಂದ ತ್ವಚೆಯು ಕಾಂತಿಯುತವಾಗಿ ಕಾಣಿಸುವುದು.

ತುಳಸಿ

ಹಿಂದೂ ಧರ್ಮದಲ್ಲಿ ತುಳಸಿ ಗಿಡ ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ಅದೇ ರೀತಿಯಲ್ಲಿ ಪ್ರತಿನಿತ್ಯ ಕೆಲವು ತುಳಸಿ ಎಲೆಗಳನ್ನು ಜಗಿದರೆ ಆಗ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು ಮತ್ತು ದೇಹವು ಶುದ್ಧವಾಗಿರುವುದು.
ಇದು ಒತ್ತಡದ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುವುದು. ಒಣಗಿಸಿ ಹುಡಿ ಮಾಡಿದ ತುಳಸಿ ಎಲೆಗಳನ್ನು ನೀವು ಹಲ್ಲುಜ್ಜಲು ಬಳಸಬಹುದು. ತುಳಸಿ ಎಲೆಗಳ ರಸ ತೆಗೆದು ಅದನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಂಡರೆ, ಆಗ ಚರ್ಮದ ಹಲವಾರು ಸಮಸ್ಯೆ ನಿವಾರಣೆ ಆಗುವುದು.

ಅಲೋವೆರಾ

ನಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿಯು ನಮಗೆ ಹಲವಾರು ಸಾಮಗ್ರಿಗಳನ್ನು ನೀಡಿದೆ. ಆದರೆ ನಾವು ಮಾತ್ರ ಇದನ್ನು ಕಡೆಗಣಿಸಿಕೊಂಡು ಬರುತ್ತಿದ್ದೇವೆ.
ಅದರಲ್ಲೂ ಅಲೋವೆರಾದಲ್ಲಿ ಅದ್ಭುತ ಗುಣಗಳು ಇವೆ. ಇದು ಬಿಸಿಲಿನ ಸುಟ್ಟ ಕಲೆ, ಅಲರ್ಜಿ, ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳನ್ನು ಏಕಕಾಲದಲ್ಲಿ ನಿವಾರಿಸುವುದು.
ಇದನ್ನು ನೈಸರ್ಗಿಕ ಮೊಶ್ಚಿರೈಸರ್ ಆಗಿಯೂ ಬಳಕೆ ಮಾಡಬಹುದು.

ಹೊಟ್ಟೆಯ ಆರೋಗ್ಯ ಕಾಪಾಡಲು ಪ್ರತಿನಿತ್ಯ ಅಲೋವೆರಾ ಜ್ಯೂಸ್ ಕುಡಿಯಬಹುದು. ಕಣ್ಣು ಊದಿಕೊಂಡ ಸಮಸ್ಯೆಯಿದ್ದರೆ ಆಗ ನೀವು ಅಲೋವೆರಾವನ್ನು ಕಣ್ಣಿನ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ.

ಆರೋಗ್ಯಕಾರಿ ಆಹಾರ

ನೀವು ತಿನ್ನುವ ಆಹಾರವು ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾಕೆಂದರೆ ಆಹಾರವು ಆರೋಗ್ಯಕಾರಿ ಆಗಿದ್ದರೆ ಆಗ ಸೌಂದರ್ಯವು ಎದ್ದು ಕಾಣುವುದು. ಉತ್ತಮ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇರುವಂತ ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

ಆದಷ್ಟು ನೀರು ಕುಡಿಯಿರಿ ಮತ್ತು ಜೀರ್ಣಕ್ರಿಯೆ ಆರೋಗ್ಯಕಾರಿ ಆಗಲು ಸರಿಯಾದ ಪ್ರಮಾಣದಲ್ಲಿ ನಾರಿನಾಂಶ ಸೇವಿಸಿ. ಜೀರಿಗೆ, ಸೋಂಪು, ಏಲಕ್ಕಿ, ದಾಲ್ಚಿನ್ನಿ, ಕರಿಮೆಣಸು, ಮೆಂತ್ಯೆಕಾಳು, ಲವಂಗ, ಅರಿಶಿನ ಇತ್ಯಾದಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
ಸಂಸ್ಕರಿತ ಉಪ್ಪನ್ನು ರುಚಿ ಹೆಚ್ಚಿಸಲು ಬಳಸಬೇಡಿ. ಇದಕ್ಕೆ ಬದಲಿಗೆ ಕಲ್ಲುಪ್ಪು ಬಳಸಿ. ಅವರೆ ಕಾಳನ್ನು ನೀವು ಪ್ರತಿನಿತ್ಯ ಸೇವಿಸಿದರೆ ಆಗ ಅದು ಅದ್ಭುತವನ್ನು ಉಂಟು ಮಾಡುವುದು.

ಒತ್ತಡ ತೆಗೆದುಕೊಳ್ಳಬೇಡಿ

ಇಂದಿನ ದಿನಗಳಲ್ಲಿ ಒತ್ತಡ ಇಲ್ಲದೆ ಯಾವುದೇ ಕೆಲಸ ಮಾಡುವಂತಹ ಜನರು ಇರುವುದು ತುಂಬಾ ಕಡಿಮೆ. ಯಾಕೆಂದರೆ ಪ್ರತಿಯೊಬ್ಬರಿಗೂ ಒತ್ತಡವಿದ್ದೇ ಇರುತ್ತದೆ. ದೇಹದಲ್ಲಿ ಅಸಮತೋಲನವು ಒತ್ತಡ ಹಾಗೂ ಖಿನ್ನತೆ ಉಂಟು ಮಾಡುವುದು. ಇದಕ್ಕಾಗಿ ಪ್ರತಿನಿತ್ಯ ಯೋಗ ಮತ್ತು ಧಾನ್ಯ ಮಾಡಿ.

ಇದರಿಂದ ಒತ್ತಡವು ದೂರವಾಗುವುದು. ಒತ್ತವಿಲ್ಲದೆ ಇದ್ದರೆ ಆಗ ತ್ವಚೆಯು ಆರೋಗ್ಯವಾಗಿ ಇರುವುದು. ಪ್ರತಿನಿತ್ಯ ಕೇವಲ 15 ನಿಮಿಷ ಕಾಲ ನೀವು ಹಾಗೆ ಕುಳಿತುಕೊಂಡು ಕೇವಲ ಉಸಿರಾಟದ ಮೇಲೆ ಗಮನಹರಿಸಿ.

- Advertisement -

Related news

error: Content is protected !!