Friday, April 26, 2024
spot_imgspot_img
spot_imgspot_img

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮೋಸ ಹೋದ ಅಪೂರ್ವಾ.! ಮನಸೋ ಇಚ್ಚೆ ಮಚ್ಚಿನಿಂದ ಇರಿದು ಡೆಡ್ಲಿ ಅಟ್ಯಾಕ್

- Advertisement -G L Acharya panikkar
- Advertisement -

ಗದಗ: ಅಪೂರ್ವಾ ಪುರಾಣಿಕ ಎಂಬ ಯುವತಿ 4 ವರ್ಷಗಳಿಂದ ಹುಬ್ಬಳ್ಳಿ ಮೂಲದ ಇಜಾಜ್ ಶಿರೂರು ಎನ್ನುವ ಮುಸ್ಲಿಂ ಯುವಕನನ್ನು ಪ್ರೀತಿ ಮಾಡಿ ಪೋಷಕರ ವಿರೋಧದಲ್ಲೇ ಆತನನನ್ನು ವಿವಾಹವಾಗಿದ್ಳು, ಮೋಸ ಮಾಡಿ ಸುಳ್ಳು ಹೇಳಿ ಅಪೂರ್ವಳನ್ನು ಮದುವೆಯಾಗಿದ್ದ ಆಟೋ ಚಾಲಕ ಇಜಾಜ್​. ನಂತರ ಇಜಾಜ್​ ಮೊದಲೇ ಮದುವೆಯಾಗಿರೋ ಸತ್ಯ ಬಯಲಾಗಿದೆ. ಆಗ ಅಪೂರ್ವಾ ವಿಚ್ಚೇದನ (Divorce) ನೀಡಲು ಮುಂದಾಗುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಇಜಾಜ್ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.

ಸತ್ಯ ಮುಚ್ಚಿಟ್ಟು ಅಪೂರ್ವಾಳನ್ನು ವಿವಾಹವಾದ ಇಜಾಜ್​ ಮದುವೆ ಬಳಿಕ ತನ್ನ ಅಸಲಿ ಆಟವನ್ನು ಆರಂಭ ಮಾಡಿದ್ದಾನೆ. ಅಪೂರ್ವಾಳನ್ನು ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಳ್ಳುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಪೂರ್ವಾ ಪುರಾಣಿಕ ಬದಲಾಗಿ, ಅರ್ಪಾ ಬಾನು ಇಜಾಜ್ ಶಿರೂರು ಅಂತಾ ಮರು ನಾಮಕರಣ ಸಹ ಮಾಡಿದ್ದ. ಮದುವೆ ಬಳಿಕ ಇಜಾಜ್ ಶಿರೂರು ಪತ್ನಿಯ ಮೇಲೆ ನಿತ್ಯ ಕಿರುಕುಳ ನೀಡ್ತಾಯಿದ್ದ. ನೀನು ಬುರ್ಕಾ ಹಾಕಿಕೊಳ್ಳಬೇಕು ಒತ್ತಾಯ ಮಾಡಿ ಟಾರ್ಚರ್ ಕೊಟ್ಟಿದ್ದಾನೆ.

ಇದನ್ನೆಲ್ಲಾ ಸಹಿಸಿಕೊಂಡು ಜೀವನ ಮಾಡ್ತಾಯಿದ್ದಳು ಈ ಅಪೂರ್ವಾ. ಆದ್ರೆ ಇಜಾಜ್ ಶಿರೂರು ಮೊದಲು ಒಂದು ಮದುವೆಯಾಗಿದ್ದಾನೆ ಅನ್ನುವ ಸತ್ಯ ಬಹಿರಂಗವಾದ ಮೇಲೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಆಗ ಇಬ್ಬರ ನಡುವೆ ಜಗಳವಾಗಿ ಅಪೂರ್ವಾ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬಂದು ವಾಸ ಮಾಡ್ತಿದ್ಳು. ಆದರೆ ಏಕಾಏಕಿ ಬಂದ ಕಿರಾತಕ ಪತಿ ಇಜಾಜ್ ಅವಳ ಮೇಲೆ ಮಚ್ಚಿನಿಂದ 23 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅರ್ಪಾ ಬಾನುರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಮನಸೋ ಇಚ್ಚೆ 23 ಕ್ಕೂ ಹೆಚ್ಚು ಬಾರಿ ದೇಹದ ಮೇಲೆ ದಾಳಿ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಾಗ ಆತನ ಜೊತೆಗೆ ಇದ್ದ ಹುಡುಗ ಗಾಬರಿಗೊಂಡು ವಾಕಿಂಗ್ ಮಾಡ್ತಾಯಿದ್ದ ಜನರಿಗೆ ಹೇಳಿದ್ದಾನೆ. ಅಷ್ಟರಲ್ಲಿ ಪತಿ ಇಜಾಜ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಪೂರ್ವಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಲಾಗುವುದು ಎಂದಿದ್ದಾರೆ.

- Advertisement -

Related news

error: Content is protected !!