Friday, May 17, 2024
spot_imgspot_img
spot_imgspot_img

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ದುರಂತ ಅಂತ್ಯ ಕಂಡ ಭೂಮಿಕಾ.! ಕುಟುಂಬಸ್ಥರಿಂದ ಲವ್ ಜಿಹಾದ್ ಆರೋಪ.!

- Advertisement -G L Acharya panikkar
- Advertisement -

ಶಿವಮೊಗ್ಗ: ಅನ್ಯಕೋಮಿನ ಯುವಕನನ್ನು ಮದುವೆಯಾಗಿ ಹೆರಿಗೆಯಾದ ಐದೇ ದಿನಕ್ಕೆ ಯುವತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ.

ಸಮೀರ್‍’ನನ್ನು ಪ್ರೀತಿಸಿ ಮದುವೆಯಾಗಿದ್ದ ಭೂಮಿಕಾ ಅಲಿಯಾಸ್ ಮುಸ್ಕಾನ್ ಬಾನು (19) ಎರಡು ವರ್ಷದ ಹಿಂದೆ ಆಯನೂರಿನಿಂದ ಸೊರಬದಲ್ಲಿರುವ ಅಜ್ಜಿ ಮನೆಗೆ ಯುವತಿ ತೆರಳಿದ್ದಳು. ದ್ವಿತೀಯ ಪಿಯುಸಿ ಓದುತ್ತಿದ್ದ ವೇಳೆ ಸಮೀರ್‍ ಜತೆ ಪ್ರೀತಿಗೆ ಬೆಳೆದಿದ್ದು, ನಂತರ ಇಬ್ಬರು ಮದುವೆಯಾಗಿದ್ದಾರೆ. ಬಳಿಕ ಭೂಮಿಕಾಳ ಹೆಸರನ್ನು ಮುಸ್ಕಾನ್ ಬಾನು ಎಂದು ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.

Significance of 'Love Jihad Law'- is it really what it is called? – Blogs  by Lexstructor

ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸಮೀರ್‍ ಗರ್ಭಿಣಿಯಾದ‌ ಈಕೆಯನ್ನು ಸರಿಯಾಗಿ ನೋಡಿಕೊಂಡಿಲ್ಲದ ಕಾರಣ ಆಕೆ ಸಾವನ್ನಪ್ಪಿರುವುದಾಗಿ ಆಕೆಯ ಕುಟುಂಬ ಆರೋಪಿಸಿದೆ. ಮುಸ್ಕಾನ್ ಬಾನು ಸಮೀರ್‍ ಜೊತೆಗಿನ ಮದುವೆ ರಿಜಿಸ್ಟಾರ್‍ ಮಾಡಲು ಮುಸ್ಕಾನ್ ಬಾನು ಅಲಿಯಾಸ್ ಭೂಮಿಕಾಳ ಕುಟುಂಬ ಎಷ್ಟೇ ಪ್ರಯತ್ನ ಮಾಡಿದರೂ ಅದು ಕೊನೆಗೂ ಸಾಧ್ಯಗಿಲ್ಲ ಎಂದು ತಿಳಿದುಬಂದಿದೆ.

ಭೂಮಿಕಾ ಮೃತಪಟ್ಟಿರುವ ವಿಷಯವನ್ನು ಸಮೀರ್‍ ಭೂಮಿಕಾ ಕುಟುಂಬಸ್ಥರಿಗೆ ತಿಳಿಸದೇ ಮುಚ್ಚಿಟ್ಟಿದ್ದ ಎಂಬ ಆರೋಪವೂ ಕೇಳಿ ಬಂದಿದ್ದು, ಭೂಮಿಕಾ ಸಾವಿಗೆ ಲವ್ ಜಿಹಾದ್ ಕಾರಣ ಎಂದು ಭೂಮಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

Related news

error: Content is protected !!