- Advertisement -
- Advertisement -
ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ನಿವಾಸಿ ಅತ್ತೂರು ನಸೀಬ್ ಅವರು ಉಪ್ಪಿನಂಗಡಿಯಲ್ಲಿರುವ ತಾಯಿಯ ಆರೋಗ್ಯ ವಿಚಾರಿಸಿ ತನ್ನ ಮನೆಗೆ ಮರಳಿದಾಗ ಅವರ ಸಂಬಂಧಿಕರು ಕೂಡಿ ಹಾಕಿ ದರೋಡೆ ಮಾಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಸೀಬ್ ಅವರು ತಾಯಿಯನ್ನು ನೋಡಿ, ಪ್ರಾಂತ್ಯ ಗ್ರಾಮದಲ್ಲಿರುವ ತನ್ನ ಮನೆಗೆ ನ.11ರಂದು ಬಂದಾಗ, ಅವರ ಮಾವ (ಹೆಂಡತಿಯ ತಂದೆ) ಇಸ್ಮಾಯಿಲ್, ತೋಡಾರು ಶರೀಫ್ ಹಾಗೂ ಇತರ ನಾಲ್ವರು ಮನೆಯಲ್ಲಿದ್ದ ಟಿ.ವಿ, ಡಿವಿಡಿ, 3-ಎಸಿ, 1 ಸೋಫಾ ಸೆಟ್, ಡೈನಿಂಗ್ ಟೇಬಲ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಪಾಸ್ಬುಕ್, ಚೆಕ್ಬುಕ್ ಮೊದಲಾದ ಸಾಮಾಗ್ರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದರು.
ಇದನ್ನು ತಡೆಯಲು ಹೋದ ಅತ್ತೂರು ನಸೀಬ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೋಣೆಯಲ್ಲಿ ಕೂಡಿ ಹಾಕಿ ಮನೆಯ ಸಾಮಾಗ್ರಿಗಳನ್ನು ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -