Sunday, May 12, 2024
spot_imgspot_img
spot_imgspot_img

ಮೋದಿ ಸರ್ಕಾರ ಜನರನ್ನು ಮೆಚ್ಚಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ: ಅಮಿತ್ ಶಾ

- Advertisement -G L Acharya panikkar
- Advertisement -

ಮೋದಿ ಸರ್ಕಾರವು ಜನರನ್ನು ಆಕರ್ಷಿಸುವ ನೀತಿಗಳನ್ನು ಮಾಡುವುದಿಲ್ಲ ಬದಲಿಗೆ ಅವರಿಗೆ ಲಾಭದಾಯಕ ನೀತಿಗಳನ್ನು ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ಮೋದಿ @ 20: ಡ್ರಮ್ಸ್ ಮೀಟ್ ಡೆಲಿವರಿ (Modi @ 20: Dreams Meet Delivery) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾ ಮಾತನಾಡುತ್ತಿದ್ದರು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್‌ನಿಂದ ಧನಸಹಾಯ ಮತ್ತು ರೂಪಾ ಪ್ರಕಟಿಸಿದ ಪುಸ್ತಕವು ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್, ಇನ್ಫೋಸಿಸ್‌ನ ನಂದನ್ ನಿಲೇಕಣಿ ಮತ್ತು ಸುಧಾ ಮೂರ್ತಿ, ಕೋಟಕ್ ಮಹೀಂದ್ರಾ ಬ್ಯಾಂಕ್ ನ ಉದಯ್ ಕೋಟಕ್, ಶಟ್ಲರ್ ಪಿವಿಸಿಂಧು ಸೇರಿದಂತೆ ಗಣ್ಯರು ಬರೆದ 21 ಲೇಖನಗಳ ಸಂಕಲನವಾಗಿದೆ. ನೀತಿ ನಿರೂಪಣೆಯಲ್ಲಿ ಅವರು ಎಂದಿಗೂ ಆತುರಪಡುವುದಿಲ್ಲ. ಆದರೆ ಅವುಗಳನ್ನು ಕಾರ್ಯಗತಗೊಳಿಸುವ ಅವರ ಸಂಕಲ್ಪವು ಅತ್ಯುತ್ತಮವಾದದ್ದನ್ನೂ ವಿಸ್ಮಯಗೊಳಿಸುತ್ತದೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಅವರು ತಮ್ಮ ನಿಲುವಿನಲ್ಲಿ ಹೇಗೆ ದೃಢವಾಗಿ ನಿಲ್ಲುತ್ತಾರೆ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಮೋದಿ ಸರ್ಕಾರ ಜನರನ್ನು ಮೆಚ್ಚಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಜನರ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಅಮಿತ್ ಶಾ. ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಮಿತ್ ಶಾ ಮತ್ತು ಜೈಶಂಕರ್ ಭಾಷಣಕಾರರಾಗಿದ್ದರು.

ಹಿರಿಯ ಅಧಿಕಾರಿಗಳು ಮತ್ತು ಕರಣ್ ಜೋಹರ್, ಸಿದ್ದಾರ್ಥ್ ಮಲ್ಲೋತ್ರಾ ಮತ್ತು ಶಂಕರ್ ಮಹಾದೇವನ್ ಮೊದಲಾದ ಬಾಲಿವುಡ್‌ನ ಪ್ರಮುಖರು ಸೇರಿದಂತೆ ಪ್ರಮುಖ ಕ್ಯಾಬಿನೆಟ್ ಮಂತ್ರಿಗಳು ಸಹ ಹಾಜರಿದ್ದರು. ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಮೋದಿಯ ವಿರೋಧಿಗಳು ಕೂಡ ಅವರು ಇಷ್ಟಪಡಲಿ ಅಥವಾ ಇಲ್ಲದಿರಲಿ ಅವರು ಅಸಾಧಾರಣ ವ್ಯಕ್ತಿ ಎಂದು ಒಪ್ಪುತ್ತಾರೆ ಎಂದು ಹೇಳಿದರು. ಅವರ ನಾಯಕತ್ವದಲ್ಲಿ ಭಾರತಕ್ಕೆ ಪ್ರಪಂಚದಾದ್ಯಂತ ಗೌರವ ಲಭಿಸಿದೆ. ಮೋದಿ ಅವರು ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರ ಎಂಬ ಮೂರು ಮಂತ್ರಗಳನ್ನು ನೀಡಿದ್ದಾರೆ. ಇದರಿಂದ ಅವರು ದೇಶದ ಜನರ ಜೀವನವನ್ನು ಉತ್ತಮವಾಗಿ ಪರಿವರ್ತಿಸಿದ್ದಾರೆ. ಇದೇ ಅವರನ್ನು ಜನಪ್ರಿಯರನ್ನಾಗಿಸಿದೆ ಎಂದರು.

ಮೋದಿಯವರು ಹೆಚ್ಚು “ಭದ್ರತೆ-ಕೇಂದ್ರಿತ” ವಿದೇಶಾಂಗ ನೀತಿ ಮತ್ತು “ಅಭಿವೃದ್ಧಿ-ಕೇಂದ್ರಿತ ರಾಜತಾಂತ್ರಿಕತೆಯನ್ನು ಮಾಡಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ. ಅವರು ನಾಗರಿಕತೆಯ ರಾಜ್ಯದ ವಿದೇಶಾಂಗ ನೀತಿಯನ್ನು ನಡೆಸುತ್ತಿದ್ದಾರೆ. ಮೋದಿ ಸರ್ಕಾರದ ಎಂಟು ವರ್ಷಗಳು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿ ಭಯೋತ್ಪಾದನೆಯನ್ನು ತಂದಿವೆ. ಅವರು ಗಡಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದ್ದಾರೆ. ಏಕೆಂದರೆ ಭದ್ರತೆಗೆ ಇದು ಅತ್ಯಗತ್ಯ ಎಂದು ಅವರಿಗೆ ತಿಳಿದಿದೆ. ಹಾಗಾಗಿ ಅದು ಉರಿ ಮತ್ತು ಬಾಲಾಕೋಟ್ ಆಗಿರಬಹುದು, ಅದುಡೋಕ್ಲಾಮ್ ಮತ್ತು ಲಡಾಖ್ ಆಗಿರಬಹುದು ಇದು ಕಠಿಣ ಭದ್ರತಾ ಸವಾಲುಗಳಿಂದ ದೂರ ಸರಿಯುವ ದೇಶವಲ್ಲ ಎಂಬುದನ್ನು ತೋರಿಸಿಕೊಟ್ಟಿರುವುದನ್ನು ಕಾಣಬಹುದು ಎಂದಿದ್ದಾರೆ ಜೈಶಂಕರ್.

ತಮ್ಮ ವಿದೇಶಿ ಭೇಟಿಗಳಲ್ಲಿ ಮೋದಿಯವರು ದೇಶಕ್ಕೆ ಬಂಡವಾಳ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಪ್ರಧಾನಿ ಜಗತ್ತನ್ನು ಮಾರುಕಟ್ಟೆಯಾಗಿ ನೋಡುವುದಿಲ್ಲ ಆದರೆ “ಜಾಗತಿಕ ಕೆಲಸದ ಸ್ಥಳ” ವಾಗಿ ನೋಡುತ್ತಾರೆ ಎಂದಿದ್ದಾರೆ. ಉಕ್ರೇನ್‌ನಂತಹ ಸಂಘರ್ಷ ವಲಯಗಳಿಂದ ಜನರನ್ನು ಸ್ಥಳಾಂತರಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಜೈಶಂಕರ್ ಇಂದು ಒಬ್ಬ ಭಾರತೀಯ ವಿದೇಶಕ್ಕೆ ಹೋದಾಗ ಸರ್ಕಾರವು ತನಗೆ ಬೆಂಬಲವಾಗಿದೆ ಎಂದು ಅವನಿಗೆ ತಿಳಿದಿದೆ ಎಂದು ಹೇಳಿದರು.

ಮೋದಿಯವರಿಂದಾಗಿ ಯೋಗ ಮತ್ತು ಭಾರತೀಯ ಸಂಸ್ಕೃತಿ ಜಗತ್ತಿಗೆ ಆಕರ್ಷಿತವಾಗಿದೆ ಎಂದು ನಾಯ್ಡು ಹೇಳಿದರು. ಮೋದಿ ಇದನ್ನು ಅಭ್ಯಾಸ ಮಾಡುತ್ತಾರೆ, ಪ್ರಚಾರ ಮಾಡುತ್ತಿದ್ದಾರೆ ಮತ್ತು ನಂಬಿಕೆಯನ್ನು ಪ್ರತಿಪಾದಿಸುತ್ತಿರುವುದೇ ಇದಕ್ಕೆ ಕಾರಣ ಎಂದು ನಾಯ್ಡು ಹೇಳಿದರು.

ಮೋದಿ ಅವರು ಸರ್ಕಾರದ ಯೋಜನೆಗಳ ಗಾತ್ರ ಮತ್ತು ಪ್ರಮಾಣ ಎರಡನ್ನೂ ಬದಲಾಯಿಸಿದ್ದಾರೆ ಎಂದು ಶಾ ಹೇಳಿದರು. “ಸಮಸ್ಯೆಗಳ ಸಂಪೂರ್ಣ ನಿರ್ಮೂಲನೆ ಉದ್ದೇಶವಾಗಿದೆ. ಹಿಂದಿನ ಯೋಜನೆಗಳು ಪ್ರತಿ ಬಜೆಟ್‌ನಲ್ಲಿ ಗುರಿಗಳನ್ನು ಹೊಂದಿದ್ದವು. ಪ್ರತಿ ಮನೆಗೆ ವಿದ್ಯುತ್ ಸಿಗುತ್ತದೆ, ಪ್ರತಿ ಮನೆಗೆ ಗ್ಯಾಸ್ ಸಂಪರ್ಕ ಸಿಗುತ್ತದೆ, ಪ್ರತಿ ಮನೆಗೂ ನಲ್ಲಿ ನೀರು ಸಿಗುತ್ತದೆ ಎಂಬುದು ಮೋದಿಯವರ ನೀತಿಯಾಗಿದೆ ಎಂದು ಶಾ ಹೇಳಿದರು.

ಮೋದಿಯವರ ಯಶಸ್ಸನ್ನು ಯಾರಾದರೂ ಅರ್ಥಮಾಡಿಕೊಳ್ಳಬೇಕಾದರೆ, ಅವರು ಗುಜರಾತ್‌ನ ಸಿಎಂ ಮತ್ತು ರಾಷ್ಟ್ರದ ಪ್ರಧಾನಿಯಾಗಿದ್ದಾಗ ಕಳೆದ 20 ವರ್ಷಗಳನ್ನು ನೋಡಬಾರದು, ಆದರೆ ಅದಕ್ಕಿಂತ ಮೊದಲು ಅವರು ತಳಮಟ್ಟದಲ್ಲಿ ಸಂಘಟನೆಯಲ್ಲಿ ಕೆಲಸ ಮಾಡಿದ 30 ವರ್ಷಗಳನ್ನು ನೋಡಬೇಕು ಎಂದು ಶಾ ಹೇಳಿದರು. ಈ ಅವಧಿಯಲ್ಲಿ ಮೋದಿಯವರು ದೇಶದಾದ್ಯಂತ ವ್ಯಾಪಕವಾಗಿ ಸಂಚರಿಸಿದರು. ಸಾಮಾನ್ಯ ಜನರೊಂದಿಗೆ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕೆಲಸ ಮಾಡಿದರು ಎಂದು ಶಾ ಹೇಳಿದರು. ಅದಕ್ಕಾಗಿಯೇ ಮೋದಿಯವರ ನೀತಿಗಳು ಬಡವರು ಮತ್ತು ವಂಚಿತರ ಕಲ್ಯಾಣ ಮತ್ತು ರಾಷ್ಟ್ರವನ್ನು ಬಲಿಷ್ಠಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿವೆ .

“ಬಡತನದಿಂದ ಮೇಲೆದ್ದ ಮೋದಿ ಜಿ ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತಿದ್ದರು. ಗುಜರಾತ್ ಸಿಎಂ ಆಗುವ ಮುನ್ನ ಅವರು ಮುನ್ಸಿಪಲ್ ಚುನಾವಣೆಯಲ್ಲೂ ಸ್ಪರ್ಧಿಸಿರಲಿಲ್ಲ. ಕಠಿಣ ಪರಿಶ್ರಮ, ಸಂವೇದನಾಶೀಲತೆಯಿಂದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಮೂಲಕ 30 ವರ್ಷಗಳು ಕಳೆದಾಗ ಮಾತ್ರ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದು ಎಂದಿದ್ದಾರೆ ಶಾ.

ಹಿಂದಿಯ ಮೇಲೆ ಸರ್ಕಾರದ ಒಲವನ್ನು ಎತ್ತಿ ಹಿಡಿದ ಶಾ ಈ ಹಿಂದೆ ನಾಯಕರು ಹಿಂದಿಯಲ್ಲಿಮಾತನಾಡುವ ಬಗ್ಗೆ ಕೀಳರಿಮೆಯನ್ನು ಹೊಂದಿದ್ದರು “ಆದರೆ ಪ್ರಪಂಚದಾದ್ಯಂತ ಪೂರ್ಣ ವಿಶ್ವಾಸದಿಂದ ಹಿಂದಿಯಲ್ಲಿ ಮಾತನಾಡುವ ಮೂಲಕ, ಮೋದಿ ಜಿ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಮತ್ತು ಒಬ್ಬರ ಸಾಮರ್ಥ್ಯಗಳ ಮಾಪಕವಲ್ಲ” ಎಂದು ತೋರಿಸಿದರು.

ಆಡಳಿತದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ತರಲು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೋದಿಯನ್ನು ನಾಯ್ಡು ಶ್ಲಾಘಿಸಿದರು. ಮೊದಲು ಪ್ರಯೋಗಗಳನ್ನು ನಡೆಸಿ ನಂತರ ಅನುಷ್ಠಾನಗೊಳಿಸುವುದರಲ್ಲಿ ನಂಬಿಕೆ ಇಟ್ಟ ವಿಜ್ಞಾನಿ ಮೋದಿ ಎಂದರು. ದೇಶದ ಗುರಿ ಮೇಕಿಂಗ್ ಆಫ್ ಡೆವಲಪ್ ಇಂಡಿಯಾ ಆಗಿರಬೇಕು ಎಂದು ಅವರು ಹೇಳಿದರು.

- Advertisement -

Related news

error: Content is protected !!