Friday, March 29, 2024
spot_imgspot_img
spot_imgspot_img

ಯುವಕನಿಗೆ ಕೈ ಕೊಟ್ಟ ಪ್ರಿಯತಮೆ; ನೊಂದ ಭಗ್ನ ಪ್ರೇಮಿ ಮಾಡಿದ ಕೆಲಸದಿಂದ ಕಷ್ಟ ಅನುಭವಿಸಿದ್ದು ಯಾರು ಗೊತ್ತಾ.?

- Advertisement -G L Acharya panikkar
- Advertisement -

ಬೆಂಗಳೂರು: ಆತನಿಗೆ ಆಕೆಯ ಮೇಲೆ ಬೆಟ್ಟದಷ್ಟು ಪ್ರೀತಿ. ಆದ್ರೆ ಇವರಿಬ್ಬರ ಪ್ರೀತಿ ಮುರಿದುಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ಮೂಡಿದ ಪ್ರೀತಿಯಿಂದ ದೂರವಾಗಿ ಭಗ್ನ ಪ್ರೇಮಿ ನೊಂದಿದ್ದಾನೆ. ನೊಂದು ಮಾಡಿದ ಕೆಲಸ ಮಾತ್ರ ಆತನಿಗೆ ಮಾತ್ರವಲ್ಲ, ಇತರರಿಗೆ ತೊಂದರೆಯಾಗಿದೆ. ಮುರಿದು ಬಿದ್ದ ಪ್ರೀತಿಯಿಂದ ಈತ ಮಾಡಿದ ಕೆಲಸ ಏನು ಗೊತ್ತಾ ಮುಂದೆ ಓದಿ….

ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಿವಾಸಿ ಸತೀಶ್ (26) ಎಂಬಾತ ದುರಾದೃಷ್ಟ ಯುವಕ. ಈತ ಪ್ರೇಯಸಿ ಕೈಕೊಟ್ಟಳೆಂದು ಐದು ಕಾರುಗಳ ಗ್ಲಾಸ್ ಹೊಡೆದು ಹಾಕಿದ್ದಾನೆ. ಈತನ ದುರಂತ ಪ್ರೇಮದಿಂದ ನೊಂದವರು ಬೇರೆಯವರು. ಕಾರಿನ ಮಾಲಕರು ಈತನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಿನ್ನೆ ನಡುರಾತ್ರಿಯಂದು ಏಳು ಕಾರುಗಳ ಗ್ಲಾಸ್ ಒಡೆದಿದ್ದಾನೆ. ಇದೀಗ ಈತನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಸತೀಶ್ ನನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!