ತಪಸ್ಯ ಮೀಡಿಯಾ ಸುಳ್ಯ ಮತ್ತು ನೈಂಟಿತ್ರೀ ಸ್ಟುಡಿಯೋ ಪ್ರಸ್ತುತ ಪಡಿಸುವ ಕೀರ್ತನ್ ಶೆಟ್ಟಿ ನಿರ್ದೇಶನದ ಪ್ರೇಮದೂರಿನ ಪಯಣ ಆಲ್ಬಂ ಸಾಂಗ್ ಸುಳ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ ೧೮ ರಂದು ಬಿಡುಗಡೆಯಾಯಿತು.
ಖ್ಯಾತ ನಟ, ಕಲಾ ನಿರ್ದೇಶಕ ಎಂ.ಕೆ ಮಠರವರು ಆಲ್ಬಂ ಸಾಂಗ್ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸುಳ್ಯದ ಯ್ಯೂಟ್ಯೂಬರ್ ವಿನ್ಯಾಸ್, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೀರ್ತನ್ ಶೆಟ್ಟಿ ನಿರ್ದೇಶನದ ಪ್ರೇಮದೂರಿನ ಪಯಣದಲ್ಲಿ ಅನಿಲ್ ರೈ ಪೆರಿಗೇರಿ ಮತ್ತು ರೋಶನಿ ದಯಾನಂದ್ ಅಭಿನಯಿಸಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ರವರ ಧ್ವನಿಯಲ್ಲಿ ಮೂಡಿಬಂದ “ವಂದೇ ಮಾತರಂ” ಗೀತೆ ಖ್ಯಾತಿಯ ಯುವ ಸಾಹಿತಿ ಪ್ರಶಾಂತ್ ಎಂ ಟಿ ವಿಟ್ಲ ಇವರ ಸಂಗೀತ ಮತ್ತು ಸಾಹಿತ್ಯದಲ್ಲಿ ಮೂಡಿ ಬಂದ ಪ್ರೇಮದೂರಿನ ಪಯಣ ಹಾಡಿಗೆ ಅರ್ಪಿತಾ ಮುಳ್ಳೇರಿಯಾ ಮತ್ತು ವಿಷ್ಣು ನಾಗ್ ಶೇಟ್ ಧ್ವನಿಯಾಗಿದ್ದಾರೆ. ಗಿರೀಶ್ ಆಚಾರ್ ಬೈತಡ್ಕರವರ ಛಾಯಾಗ್ರಹಣ ಮತ್ತು ಸಂಕಲನವಿದೆ. ತಪಸ್ಯ ಮೀಡಿಯಾ ಸುಳ್ಯ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡ ಪ್ರೇಮದೂರಿನ ಪಯಣ ಎರಡೇ ದಿನದಲ್ಲಿ ೧೩,೦೦೦ಕ್ಕಿಂತಲೂ ಅಧಿಕ ವೀಕ್ಷಣೆ ಪಡೆದು ಭಾರೀ ಸದ್ದು ಮಾಡುತ್ತಿದೆ.