Wednesday, May 15, 2024
spot_imgspot_img
spot_imgspot_img

ರಥೋತ್ಸವದ ವೇಳೆ ಭಾರೀ ದುರಂತ; ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ 11 ಮಂದಿ ದುರ್ಮರಣ!

- Advertisement -G L Acharya panikkar
- Advertisement -

ತಮಿಳುನಾಡಿನ ತಂಜಾವೂರಿ ಕಲಿಮೇಡು ಎಂಬಲ್ಲಿ ದೇವಾಲಯದ ರಥೋತ್ಸವದ ಸಂಭ್ರಮದ ವೇಳೆ ಭೀಕರ ಅವಘಡವೊಂದು ಸಂಭವಿಸಿ 10 ಜನರನ್ನು ಬಲಿ ಪಡೆದಿದೆ.

ರಥೋತ್ಸವದ ವೇಳೆ ವಿದ್ಯುತ್ ಹರಿದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ರಥೋತ್ಸವದ ಮೆರವಣಿಗೆಯು ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಿದು ಬೆಳಿಗ್ಗೆ 3 ಗಂಟೆಗೆ ಸುಮಾರಿಗೆ ರಥದ ಮೇಲೆ ನಿರ್ಮಿಸಲಾದ ಗುಮ್ಮಟ ಮತ್ತು ಅಲಂಕಾರಗಳು ಹೈ-ಟೆನ್ಷನ್ ತಂತಿಯನ್ನು ಮುಟ್ಟಿದಾಗ ಘಟನೆ ಸಂಭವಿಸಿದೆ.

ರಥ ಎಳೆಯುತ್ತಿದ್ದ ಭಕ್ತಾದಿಗಳಿಗೆ ವಿದ್ಯುತ್ ಸ್ಪರ್ಶಗೊಂಡು ಈ ಅನಾಹುತ ಸಂಭವಿಸಿದೆ , ಘಟನೆಯಲ್ಲಿ ಕೆಲವರು ಅಸ್ವಸ್ಥಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!