- Advertisement -
- Advertisement -
ಪಾಲಕ್ಕಾಡ್: ಕೇರಳದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ನಾಯಿ ಕಚ್ಚಿ ರೇಬಿಸ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಈದೀಗ ಒಂದು ತಿಂಗಳ ನಂತರ ಕೊನೆಯುಸಿರೆಳೆದಿದ್ದಾಳೆ.
ಪಾಲಕ್ಕಾಡ್ ಜಿಲ್ಲೆಯ ಮಂಕರ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀಲಕ್ಷ್ಮಿ ಮೇ 30 ರಂದು ಕಾಲೇಜಿಗೆ ತೆರಳುತ್ತಿದ್ದಾಗ ನಾಯಿ ಕಚ್ಚಿತ್ತು. ಮುನ್ನಚ್ಚೆರಿಕೆ ಕ್ರಮವಾಗಿ ಲಸಿಕೆಯನ್ನು ಪಡೆದುಕೊಂಡಿದ್ದರು. ಅರಂಭದಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ.
ನಂತರ ದಿನಗಳಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಶ್ರೀಲಕ್ಷ್ಮಿಯನ್ನು ತ್ರಿಶೂರ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ರೇಬಿಸ್ ಲಕ್ಷಣಗಳು ಕಂಡುಬಂದಿದೆ. ರೇಬಿಸ್ಗೆ ಚಿಕಿತ್ಸೆ ಆರಂಭಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಇದೀಗ ಶ್ರೀಲಕ್ಷ್ಮಿ ಮೃತಪಟ್ಟಿದ್ದಾಳೆ.
- Advertisement -