- Advertisement -
- Advertisement -
ತುಮಕೂರು: ಲಾರಿಯ ಟಯರ್ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್ ಅವರು ಲಾರಿ ಚಾಲಕರು.
ಮಂಗಳವಾರ ವಾಹನ ಓಡಿಸುವಾಗ ಲಾರಿ ಟಯರ್ ಹೀಟ್ ಆಗಿದೆ ಅಂದು ಚೆಕ್ ಮಾಡಿಯೇ ಬಿಡೋಣ ಎಂದು ಅವರು ಲಾರಿ ನಿಲ್ಲಿಸಿ, ಇಳಿದು ಚೆಕ್ ಮಾಡಲು ಶುರು ಮಾಡಿದರು. ಹೀಗೆ ಚೆಕ್ ಮಾಡುವ ವೇಳೆಯೇ ಟಯರ್ ಸ್ಫೋಟಗೊಂಡು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
- Advertisement -