Monday, May 6, 2024
spot_imgspot_img
spot_imgspot_img

ವಂಚನೆ ಪ್ರಕರಣ: ರೈತನ ಖಾತೆಯಿಂದ 2 ಕೋಟಿ ರೂ. ಅಕ್ರಮ ವಹಿವಾಟು; ಲಕ್ಷಾಂತರ ರೂ. ತೆರಿಗೆ ಕಟ್ಟಲು ರೈತನಿಗೆ ನೋಟಿಸ್

- Advertisement -G L Acharya panikkar
- Advertisement -

ಬೆಂಗಳೂರು: ಹಸು ಲೋನ್​ಗೆ ದಾಖಲೆ​​ ನೀಡಿದ್ದ ರೈತನಿಗೆ ನೋಟಿಸ್ ನೀಡಲಾಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜುಗೆ ನೋಟಿಸ್​​ ಜಾರಿಯಾಗಿದೆ. ಹಸು ಲೋನ್ ಕೊಡಿಸುವುದಾಗಿ ಆಕ್ರಮ ವಹಿವಾಟು ಮಾಡಲಾಗಿತ್ತು. ಮುನಿರಾಜು ಬ್ಯಾಂಕ್​ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ರೈತ ಬಲಿಪಶುವಾಗಿದ್ದಾರೆ ಎಂದು ತಿಳಿದುಬಂದಿದೆ.

ರೈತನಿಗೆ ಲೋನ್ ಕೊಡಿಸುವುದಾಗಿ ಝಾನ್ಸಿ ಹೇಳಿದ್ದರು. ರೈತನ ಬ್ಯಾಂಕ್ ಖಾತೆ ವಿವರಗಳನ್ನ ಝಾನ್ಸಿ ಎಂಬವರು ಪಡೆದಿದ್ದರು. 2 ಬಾರಿ ಝಾನ್ಸಿಗೆ ರೈತ ಮುನಿರಾಜು ಒಟಿಪಿ ಹೇಳಿದ್ದರು. ಬಳಿಕ ಲೋನ್ ರಿಜೆಕ್ಟ್ ಆಗಿದೆ ಎಂದು ಝಾನ್ಸಿ ಹೇಳಿದ್ದಳು. ಇದಾದ ಬಳಿಕ ಜಿಎಸ್​​ಟಿ ಅಧಿಕಾರಿಗಳಿಂದ ನೋಟಿಸ್​ ಬಂದಿದೆ. ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಬಾಗಲೂರು ಠಾಣೆಗೆ ಮುನಿರಾಜು ದೂರು ನೀಡಿದ್ಧಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.

- Advertisement -

Related news

error: Content is protected !!