ಬೆಂಗಳೂರು: ಹಸು ಲೋನ್ಗೆ ದಾಖಲೆ ನೀಡಿದ್ದ ರೈತನಿಗೆ ನೋಟಿಸ್ ನೀಡಲಾಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜುಗೆ ನೋಟಿಸ್ ಜಾರಿಯಾಗಿದೆ. ಹಸು ಲೋನ್ ಕೊಡಿಸುವುದಾಗಿ ಆಕ್ರಮ ವಹಿವಾಟು ಮಾಡಲಾಗಿತ್ತು. ಮುನಿರಾಜು ಬ್ಯಾಂಕ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ರೈತ ಬಲಿಪಶುವಾಗಿದ್ದಾರೆ ಎಂದು ತಿಳಿದುಬಂದಿದೆ.
ರೈತನಿಗೆ ಲೋನ್ ಕೊಡಿಸುವುದಾಗಿ ಝಾನ್ಸಿ ಹೇಳಿದ್ದರು. ರೈತನ ಬ್ಯಾಂಕ್ ಖಾತೆ ವಿವರಗಳನ್ನ ಝಾನ್ಸಿ ಎಂಬವರು ಪಡೆದಿದ್ದರು. 2 ಬಾರಿ ಝಾನ್ಸಿಗೆ ರೈತ ಮುನಿರಾಜು ಒಟಿಪಿ ಹೇಳಿದ್ದರು. ಬಳಿಕ ಲೋನ್ ರಿಜೆಕ್ಟ್ ಆಗಿದೆ ಎಂದು ಝಾನ್ಸಿ ಹೇಳಿದ್ದಳು. ಇದಾದ ಬಳಿಕ ಜಿಎಸ್ಟಿ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಬಾಗಲೂರು ಠಾಣೆಗೆ ಮುನಿರಾಜು ದೂರು ನೀಡಿದ್ಧಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.