- Advertisement -
- Advertisement -
ಕಾರ್ಕಳ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮುದ್ರಾಡಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಮುದ್ರಾಡಿಯ ಬಲ್ಲಾಡಿ ನಿವಾಸಿ ಶ್ರೀನಿವಾಸ (55) ಎಂದು ಗುರುತಿಸಲಾಗಿದೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ ಇವರು, ಹೆಬ್ರಿಯಿಂದ ಮುದ್ರಾಡಿಗೆ ಬಸ್ಸಿನಲ್ಲಿ ಬಂದಿದ್ದು, ಮುದ್ರಾಡಿಯಲ್ಲಿ ಬಸ್ಸಿನಿಂದ ಇಳಿಯಲು ಸೀಟಿನಿಂದ ಎದ್ದೇಳುವಾಗ ಒಮ್ಮೆಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
- Advertisement -