Saturday, May 18, 2024
spot_imgspot_img
spot_imgspot_img

ವಿಟ್ಲ: ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ : ಫಲಾನುಭವಿಗಳಿಗೆ ಡಾ| ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಿಂದ ಬಿಡುಗಡೆಯಾದ ಅನುದಾನದ ಚೆಕ್ ವಿತರಣೆ ಹಾಗೂ 15ನೇ ಹಣಕಾಸು ಅನುದಾನದಲ್ಲಿ ನಿಮಾರ್ಣವಾದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಸಮ್ಮುಖದಲ್ಲಿ ನಡೆಯಿತು.

2021-22ನೇ ಸಾಲಿನ ಡಾ| ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಿಂದ ಬಿಡುಗಡೆಯಾದ ಅನುದಾನವನ್ನು ಪುತ್ತೂರು ಪುರಸಭೆ ವ್ಯಾಪ್ತಿಯ 11 ಫಲಾನುಭವಿಗಳಿಗೆ ಮನೆ ರಿಪೇರಿ ಹಾಗೂ ವೈದ್ಯಕೀಯ ವೆಚ್ಚದ ಚೆಕ್’ನ್ನು ಶಾಸಕ ಸಂಜೀವ ಮಠಂದೂರು ವಿತರಿಸಿ 2021-22ನೇ ಸಾಲಿನ 15ನೇ ಹಣಕಾಸು ಅನುದಾನ ರೂ 69.10 ಲಕ್ಷದಲ್ಲಿ ನಿಮಾರ್ಣವಾದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.

ಫಲಾನುಭವಿಗಳನ್ನು ಉದ್ದೇಶಿಸಿ ಮಾತಾಡಿದ ಶಾಸಕ ಸಂಜೀವ ಮಠಂದೂರು “ಫಲಾನುಭವಿಗಳು ಪಡೆದ ಅನುದಾನವನ್ನು ಆಯಾ ಉದ್ದೇಶಕ್ಕಾಗಿ ವಿನಿಯೋಗಿಸ ಬೇಕು” ಎಂದು ತಿಳಿಸಿದರು. ಅಂತೆಯೇ ಪ್ರಧಾನಿಯವರ ಹರ್ ಘರ್ ತಿರಂಗ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ್ ನಾಯ್ಕ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ರಕ್ಷಿತಾ ಸನತ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -

Related news

error: Content is protected !!