Wednesday, April 24, 2024
spot_imgspot_img
spot_imgspot_img

ವಿಟ್ಲ: ವಿ.ಹಿಂ.ಪ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -
vtv vitla

ವಿಟ್ಲ:ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ 41 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗಣೇಶೋತ್ಸದ ಉದ್ಘಾಟನ ಸಮಾರಂಭ ಅನಂತ ಸದನ ವಿಟ್ಲದಲ್ಲಿ ನಡೆಯಿತು.

ಬೆಳಗ್ಗೆ ಶ್ರೀ ಮಹಮ್ಮಾಯಿ ಮಂದಿರದಿಂದ ಗಣೇಶ ವಿಗ್ರಹವನ್ನು ಮೆರವಣಿಗೆಯೊಂದಿಗೆ ವಿಟ್ಲ ಅನಂತ ಸದನ ಇಲ್ಲಿಗೆ ಕರೆತರಲಾಯಿತು. ಬಳಿಕ ಗಣಪತಿ ವಿಗ್ರಹದ ಪ್ರತಿಷ್ಠೆ ನಡೆದು ಮಹಾ ಗಣಪತಿ ಹವನ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಕಿಶೋರ್, ದಂತ ವೈದ್ಯರು ಅಶ್ವಿನಿ ಕ್ಲಿನಿಕ್ ವಿಟ್ಲ ಹಾಗೂ ಗಣ್ಯರು ಧ್ವಜರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನ ಸಮಾರಂಭ ನಡೆಯಿತು. ಬಟ್ಟು ಯಾನೆ ನಾರಾಯಣ ಗುರುಸ್ವಾಮಿ, ಅಯ್ಯಪ್ಪ ದೇವಸ್ಥಾನ ವಿಟ್ಲ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ, ಡಾ. ಕಿಶೋರ್, ದಂತ ವೈದ್ಯರು ಅಶ್ವಿನಿ ಕ್ಲಿನಿಕ್ ವಿಟ್ಲ, ಬಟ್ಟು ಯಾನೆ ನಾರಾಯಣ ಗುರುಸ್ವಾಮಿ, ಅಯ್ಯಪ್ಪ ದೇವಸ್ಥಾನ ವಿಟ್ಲ, ಸೀತಾರಾಮ ಭಟ್ ಪೆರಾಜೆ, ಸತ್ಸಂಗ ಪ್ರಮುಖ್ ವಿ. ಹಿಂ. ಪ. ಪುತ್ತೂರು ನಗರ, ಶೀನ, ಮೊಕ್ತೇಸರರು ಶ್ರೀ ಮಹಮ್ಮಾಯಿ ಮಂದಿರ ಮೇಗಿನಪೇಟೆ ಉಪಸ್ಥಿತರಿದ್ದರು.

- Advertisement -

Related news

error: Content is protected !!