- Advertisement -
- Advertisement -
ವಿಟ್ಲ: ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೊಬ್ಬ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅಪ್ಪಿ ಹಿಡಿದು ಚುಂಬಿಸಿದ್ದಾನೆಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮಹಮ್ಮದ್ ನೌಷಾದ್ ಎಂಬಾತ ಅಪ್ರಾಪ್ತ ವಯಸ್ಕ ಬಾಲಕಿಯ ಮನೆಯ ಬಳಿ ಬಾಡಿಗೆಗೆ ವಾಸವಾಗಿದ್ದು, ಶಾಲೆಗೆ ತೆರಳಿದ್ದ ಆಕೆಯನ್ನು ಪುಸುಲಾಯಿಸಿ ವಿಟ್ಲ ಪೇಟೆಯಿಂದ ಉಳ್ಳಾಲ ಬೀಚಿಗೆ ಕರೆದುಕೊಂಡು ಹೋಗಿ ಕೊಡಂಗಾಯಿ ಎಂಬಲ್ಲಿ ಅಪ್ಪಿ ಹಿಡಿದು ಚುಂಬಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಎಂದಿನಂತೆ ಬಾಲಕಿಯು ಮನೆಯಿಂದ ಶಾಲೆಗೆ ಹೊರಟಿದ್ದಳು ಆದರೆ ಆಕೆ ಶಾಲೆಗೆ ಬರದಿದ್ದಾಗ ಶಿಕ್ಷಕಿಯು ನಿಮ್ಮ ಮಗಳು ಶಾಲೆಗೆ ಬಂದಿರುವುದಿಲ್ಲವಾ? ಎಂದು ಮನೆಯವರಲ್ಲಿ ವಿಚಾರಿಸಿದ್ದ ವೇಳೆ ವಿಷಯ ತಿಳಿದ ಬಾಲಕಿಯ ತಾಯಿಯು ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದರು . ಆಗ ಆಕೆಯು ಬಸ್ಸಿನಲ್ಲಿ ಬಂದು ಬೈಕ್ ನಲ್ಲಿ ಹೋಗಿರುವುದಾಗಿ ಸಹಪಾಠಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ.
- Advertisement -