- Advertisement -
- Advertisement -
ವಿಟ್ಲ: ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳದೆ ಅನುಮಾನಾಸ್ಪದವಾಗಿ ಮೃತಪಟ್ಟ ಇಡ್ಕಿದು ಎಂಬಲ್ಲಿ ಘಟನೆ ನಡೆದಿದೆ
ಇಡ್ಕಿದು ಗ್ರಾಮದ ಕುಮೇರು ನಿವಾಸಿ ಕಾಂಗ್ರೇಸ್ ಮುಖಂಡ ದಿ. ವಾಸು ನಾಯ್ಕ ಅವರ ಪುತ್ರ ಭಾಸ್ಕರ್ (38) ಮೃತ ಪಟ್ಟ ವ್ಯಕ್ತಿ. ಇವರು ಮೇಸ್ತ್ರಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ ಆಶಾ, ಪುತ್ರಿಯರಾದ ಹಸ್ತಪ್ರಿಯಾ, ಧೃತಿಯರನ್ನು ಅಗಲಿದ್ದಾರೆ.
ಕಡಂಬು ನಿವಾಸಿ ಯೋಗೀಶ್ ಎಂಬಾತನೊಂದಿಗೆ ಮೃತ ಭಾಸ್ಕರ್ ಅವರಿಗೆ ಹಣದ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿದ್ದು ಈತ ಆಗಾಗ ಭಾಸ್ಕರನ ಮನೆಗೆ ಬರುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
- Advertisement -