ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿದ್ದ Zen Textiles ಕ್ವಿಝ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ಬಹುಮಾನ ಕಾರ್ಕಳ ಬೈಲೂರಿನ ಪ್ರಸಾದಿನಿ ಶೆಟ್ಟಿ
ಪಡೆದುಕೊಂಡಿದ್ದಾರೆ.
ತಮ್ಮ ತಮ್ಮ ಸ್ಟೇಟಸ್ ನಲ್ಲಿ ಝೆನ್ ಟೆಕ್ಸ್ ಟೈಲ್ಸ್ ನ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕುವಂತೆ ವಿನಂತಿಸಲಾಗಿತ್ತು. ಅದರ ಸ್ಕ್ರೀನ್ ಶಾಟ್ ತೆಗೆದು ಕಳಿಸಲು ತಿಳಿಸಲಾಗಿತ್ತು. ಹೀಗೆ ಬಂದ ಸ್ಟೇಟಸ್ ನ ಸ್ಕ್ರೀನ್ ಶಾಟ್ ಚೀಟಿಯನ್ನು ಡ್ರಾ ದಲ್ಲಿ ಸೇರಿಸಲಾಗಿತ್ತು.
ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫಲಿತಾಂಶ ಘೋಷಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮೊಹಮ್ಮದ್, ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ರಮಾನಾಥ ವಿಟ್ಲ, ಕಮಲಾಕ್ಷಿ ಒಕ್ಕೆತ್ತೂರು ಮೂಲೆ, ಮೊಹಮ್ಮದ್ ಕೆಮ್ಮನ್ ಕಜೆ, ಉಬೈದ್ ವಿಟ್ಲ ಬಝಾರ್, ಮಾಲಕ ರಫೀಕ್ ಝೆನ್, ಎಂ ಎ ಗಫೂರು, ಜೈನುಲಾಬಿ, ಎನ್ ಸುಲೈಮಾನ್, ಉಪಸ್ಥಿತರಿದ್ದರು.
ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.