ವಿಟ್ಲ: “ಭಜನೋತ್ಸವ ಸಮಿತಿ – ವಿಟ್ಲ” ಇದರ ವತಿಯಿಂದ ಜರಗಲಿರುವ “ಭಜನೋತ್ಸವ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.
ಆಮಂತ್ರಣವನ್ನು ಶ್ರೀ ಚಾಮುಂಡೇಶ್ವರೀ, ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಬಿಡುಗಡೆಗೊಡೆಗೊಳಿಸಿ ಶುಭಹಾರೈಸಿದರು.
ಕಾರ್ಯಕ್ರಮವು ಭಜನೋತ್ಸವ ಸಮಿತಿ ವಿಟ್ಲ ಇದರ ಅಧ್ಯಕ್ಷ ಹಾಗೂ ವಿಟ್ಲ ಗ್ರಾಮೀಣ ಬ್ಯಾಂಕ್ ಇದರ ಅಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ಇದರ ಅಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಭಜನೋತ್ಸವ ಸಮಿತಿ ವಿಟ್ಲ ಇದರ ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ ಆರ್.ಕೆ, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬಂಟ್ವಾಳ ತಾಲೂಕು ಇದರ ದಿನೇಶ್ ಮಾಮೇಶ್ವರ, ಕೀರ್ತನ್ ಕೆದಿಲಾಯ, ಭಜನೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ನಂತರ ಭಜನೋತ್ಸವ ಸಮಿತಿ, ವಿಟ್ಲ ಇದರ ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ ಆರ್.ಕೆ. ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರಗಿತು. ಈ ವೇಳೆ ಭಜನೋತ್ಸವ ಸಮಿತಿಯ ಪದಾಧಿಕಾರಿಗಳು, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ಪ್ರಮುಖರು, ಹಿಂದೂ ಧಾರ್ಮಿಕ ಮುಖಂಡರು, ಸಂಘಟನಾ ಪ್ರಮುಖರು, ಭಜನಾ ಮಂಡಳಿಗಳ ಪ್ರಮುಖರು ಹಾಗೂ ಭಜನಾಸಕ್ತರು ಉಪಸ್ಥಿತರಿದ್ದರು.