- Advertisement -
- Advertisement -
ವಿಟ್ಲ: ಪಾರ್ಕ್ ಮಾಡಿದ್ದ ಲಾರಿಯೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ವಿಟ್ಲದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಪಕ್ಕ ಈ ಘಟನೆ ನಡೆದಿದೆ. ಗಣೇಶ್ ಪ್ರಸಾದ್ ಎಂಬ ಕಲ್ಲು ತುಂಬಿದ್ದ ಲಾರಿಯನ್ನು ಚಾಲಕ ಅಲ್ಲೇ ಪಾರ್ಕ್ ಮಾಡಿ ಚಹಾ ಕುಡಿಯಲು ತೆರಳಿದ್ದಾರೆ. ಈ ವೇಳೆ ಲಾರಿ ಮಗುಚಿ ಬಿದ್ದಿದೆ.
ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಹಾನಿ ಸಂಭವಿಸಿಲ್ಲ. ಮೊನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಣ್ಣು ಕುಸಿದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
- Advertisement -