- Advertisement -
- Advertisement -
ವಿಟ್ಲ: ಕಾಳುಮೆಣಸು ತೆಗೆಯುವ ವೇಳೆ ಮರದಿಂದ ಆಯತಪ್ಪಿ ಬಿದ್ದು ಅಸುನೀಗಿದ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಭುಜಂಗಬೆಟ್ಟು ಮನೆ ನಿವಾಸಿ ಕೇಶವ ನಾಯ್ಕ್ (56)ಎನ್ನಲಾಗಿದೆ. ಈ ಘಟನೆ ಕೇಪು ಗ್ರಾಮದ ಸಾರಡ್ಕ ಎಂಬಲ್ಲಿ ನಡೆದಿದೆ.
ಕೇಪು ಗ್ರಾಮದ ಸಾರಡ್ಕದ ಕೃಷ್ಣ ಉಪಾಧ್ಯ ಎಂಬವರ ತೋಟದಲ್ಲಿ ಕೆಲಸ ಮಾಡಿ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು ಮರುದಿನ 05-01-2023 ರಂದು ಸಂಜೆ 4.30 ಗಂಟೆಯ ಸಮಯಕ್ಕೆ ಹಲಸಿನ ಮರ ಏರಿ ಕಾಳು ಮೆಣಸು ತೆಗೆಯುವ ಸಮಯ ಆಕಸ್ಮಿಕವಾಗಿ ಕೈ, ಕಾಲು ಜಾರಿ ಕೆಳಗೆ ನೆಲಕ್ಕೆ ಬಿದ್ದಿದ್ದಾರೆ. ಗಾಯಾಳುವನ್ನು ತಕ್ಷಣ ಕೃಷ್ಣ ಉಪಾಧ್ಯರವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಕೇಶವ ನಾಯ್ಕ್ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -