ವಿಟ್ಲ : ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ನಾಳೆ ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ. ಈ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ವಿಟ್ಲ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಿಗೆ ವಿಟ್ಲ ಪ್ರಖಂಡ ನ್ನು ಸಲ್ಲಿಸಲಾಯಿತು.
ಮತ್ತೊಮ್ಮೆ ಕಾಶ್ಮೀರದಲ್ಲಿ 1990 ರಂತ ಹಿಂದುಗಳನ್ನು ಆಯ್ತು ಹತ್ಯೆ ಮಾಡಲಾಗುತ್ತಿದೆ ಇದೆಲ್ಲವನ್ನೂ ಗಡಿಯಾಚೆಗಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಮತ್ತು 35 ಎ ಅನ್ನು ತೆಗೆದುಹಾಕಿದ ನಂತರ, ಈಗ ಅಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯಿಂದಾಗಿ ಭಯೋತ್ಪಾದಕ ಘಟನಗಳಲ್ಲಿ ಹಠಾತ್ ಹೆಚ್ಚಳವಾಗಿದೆ. ಬಜರಂಗದಳವೂ, ಕಾಶ್ಮೀರದ ಹಿಂದೂ ಸಮಜದೊಂದಿಗೆ ಪೂರ್ಣ ಬಲದಿಂದ ಎಂತಿದೆ. ಈ ಕಾಶ್ಮೀರಿ ಹಿಂದೂಗಳ ಸರಣಿ ಹತ್ಯೆಯನ್ನು ಖಂಡಿಸಿ ಬಜರಂಗದಳ 09.10 2021 ರ ಶನಿವಾರದಂದು ಎಲ್ಲಾ ಮುಖಂಡ (ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ. ಪಾಕಿಸ್ತಾನ ಮತ್ತು ಭಯೋತ್ಪಾದಕರ ಪ್ರತಿಕೃತಿಗಳನ್ನು ದಹಿಸಿವ ಮೂಲಕ ಕಾಶ್ಮೀರದ ಹಿಂದೂ ಜನತೆಗೆ ಇಡೀ ಭಾರತ ಮತ್ತು ವಿಶ್ವ ಹಿಂದೂ ಪರಿಷತ್ ಅವರೊಂದಿಗೆ ಇರುತ್ತದೆ ಎಂಬ ವಿಶ್ವಾಸವನ್ನು ನೀಡುತ್ತಿದ್ದೆವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಕಾರ್ಯದರ್ಶಿ ಚರಣ್, ಸಹಸಂಚಾಲಕ ಚಂದ್ರಹಾಸ ಕನ್ಯಾನ, ಗೋರಕ್ಷಕ್ ನಾಗೇಶ ಸಾಲೆತ್ತೂರ್, ಕಾರ್ಯಕರ್ತರಾದ ಮಂಜು ಇನ್ನಿತರರು ಉಪಸ್ಥಿತರಿದ್ದರು.