- Advertisement -
- Advertisement -
ವಿಟ್ಲ: ಶ್ರೀ ಮಹಮ್ಮಾಯೀ ಮಾರಿಪೂಜಾ ಸಮಿತಿ, ಕುಂಟ್ರಕಲ, ಕೊಳ್ನಾಡು ಇದರ ವತಿಯಿಂದ ಕುಂಟ್ರಕಲದಲ್ಲಿ ಮಾ.04ರ ಶುಕ್ರವಾರದಂದು ರಾತ್ರಿ ಜರಗಲಿರುವ ಶ್ರೀ ಮಹಮ್ಮಾಯೀ ದೇವಿಯ ಮಾರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಕುಂಟ್ರಕಲದ ಶ್ರೀ ಮಹಮ್ಮಾಯೀ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯರು, ಶ್ರೀ ಮಹಮ್ಮಾಯೀ ಮಾರಿ ಪೂಜಾ ಸಮಿತಿ, ಕುಂಟ್ರಕಲ ಹಾಗೂ ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -