- Advertisement -
- Advertisement -
ವಿಟ್ಲ: ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16ರಿಂದ 20.ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದ್ದು, ಈ ಪ್ರಯುಕ್ತ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಅಂಗಣ ಕೊಟ್ಟು ಕಾರ್ಯಕ್ರಮವು ಇಂದು ನೇರವೇರಿತು. ಕಾರ್ಯಕ್ರಮಕ್ಕೆ ನಾಲ್ಪೋಲಿಗಳು ಆಗಮಿಸಿದ್ದರು. ಅನೇಕ ವರ್ಷಗಳ ಇತಿಹಾಸವಿರುವ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಪರಂಪರೆಯಾನುಸಾರವಾಗಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ವಿ.ಆರ್, ಕೃಷ್ಣಯ್ಯ.ಕೆ, ಶ್ರೀನಿವಾಸ ರೈ ಕುಂಡಕೋಲಿ, ದೇವದಾಸ್ ರೈ, ಪ್ರಕಾಶ್ ರೈ ಕಲ್ಲಂಗಳ, ಜಿನಚಂದ್ರ ಜೈನ್ ಹಾಗೂ ಊರನ ಭಕ್ತಾಭಿಮಾನಿಗಳು ಬಾಹವಹಿಸಿದ್ದರು.
- Advertisement -