ವಿಟ್ಲ: ಕೊಳ್ನಾಡು – ಸಾಲೆತ್ತೂರು ಪ್ರದೇಶದಲ್ಲಿ ನಡೆದ ಕೊರಗಜ್ಜ ದೈವದ ಅವಹೇಳನದ ಘಟನೆಯ ಬಗ್ಗೆ ಕುಂಡಡ್ಕ ಶೆಡ್ಡು ಬಾಬು ಆಳ್ವ ಇವರ ಮನೆಯಲ್ಲಿ ಇರುವ ಕೊರಗಜ್ಜನ ಕಟ್ಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕುಂಡಡ್ಕ ಶಾಖೆ ವತಿಯಿಂದ ಗ್ರಾಮದ ಪ್ರಮುಖರು ಮತ್ತು ಭಕ್ತರು. ಸಂಘಟನೆಯ ಪ್ರಮುಖರು. ಪಕ್ಷದ ಪ್ರಮುಖರು . ಭಜರಂಗದಳದ ಪ್ರಮುಖರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ವಿಟ್ಲ: ಮುಸ್ಲಿಂ ಸಮುದಾಯದ ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಡಾನ್ಸ್ ಮಾಡಿದ ವರ.?
ಈ ಸಂದರ್ಭದಲ್ಲಿ ಭಜರಂಗದಳ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ಹಾಗೂ ಕುಂಡಡ್ಕ ಶಾಖೆಯ ಸಂಚಾಲಕರಾದ ಕಿಶನ್ ಕುಂಡಡ್ಕ. ಸಹ ಸಂಚಾಲಕರಾದ ಹೇಮಂತ್ ಮರುವಾಳ. ಗೋ ರಕ್ಷಕ್ ಪ್ರಮುಖ್ ಹೇಮಂತ್ ಪಿಲಿಪ್ಪೆ, ಬಿಜೆಪಿ ಮುಖಂಡರಾದ ದಯಾನಂದ್ ಶೆಟ್ಟಿ ಉಜಿರೆಮಾರ್, ಕುಳ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಬರೆ ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಇದನ್ನೂ ಓದಿ: ವಿಟ್ಲ: ಮದುಮಗನಿಂದ ಕೊರಗಜ್ಜನಿಗೆ ಅವಮಾನ; ಮದುಮಗನ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು