Saturday, April 27, 2024
spot_imgspot_img
spot_imgspot_img

ಯುವಶಕ್ತಿ ಕಡೇಶಿವಾಲಯ(ರಿ), ಯುವಸ್ಪಂದನ ಪೆರ್ನೆ, ಯುವಕೇಸರಿ ಗಡಿಯಾರ, ಯುವವೇದಿಕೆ ಪೆರಾಜೆ(ರಿ), ಶ್ರೀಶಾರದಾ ಯುವವೇದಿಕೆ(ರಿ) ಮಾಣಿ ಸಂಘಟನೆಗಳ ಕಾರ್ಯಕರ್ತರಿಂದ ಅಂಧಕಲಾವಿದರಿಗೆ ನಿಧಿ ಹಸ್ತಾಂತರ

- Advertisement -G L Acharya panikkar
- Advertisement -
vtv vitla
vtv vitla

ಪರೋಪಕಾರಾರ್ಥಂ ಇದಂ ಶರೀರಂ ಎಂಬ ಧ್ಯೇಯವಾಕ್ಯದೊಂದಿಗೆ ಸೇವಾಕಾರ್ಯಕ್ಕಾಗಿ ಆರಂಭಗೊಂಡಿರುವ ಯುವಶಕ್ತಿ ಸೇವಾಪಥದ ಮೊದಲ ಸೇವಾಹೆಜ್ಜೆ ಮಾಣಿ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯಲ್ಲಿ ನೆನ್ನೆ ಸಂಪನ್ನಗೊಂಡಿತು.

ಮಂಗಳೂರಿನಲ್ಲಿ ನೆಲೆಸಿರುವ ಅಂಧಕಲಾವಿದರಾದ ಶಾರದಾ ಕಲಾವೃಂದ ಶೃಂಗೇರಿಯ ಕಲಾವಿದರಿಗಾಗಿ ಹಮ್ಮಿಕೊಂಡಿದ್ದ ಸೇವಾಯೋಜನೆಯಲ್ಲಿ ಯುವಶಕ್ತಿ ಕಡೇಶಿವಾಲಯ(ರಿ),ಯುವಸ್ಪಂದನ ಪೆರ್ನೆ,ಯುವಕೇಸರಿ ಗಡಿಯಾರ,ಯುವವೇದಿಕೆ ಪೆರಾಜೆ(ರಿ),ಶ್ರೀಶಾರದಾ ಯುವವೇದಿಕೆ(ರಿ) ಮಾಣಿ ಸಂಘಟನೆಗಳ ಕಾರ್ಯಕರ್ತರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.

ಸಹೃದಯಿ ದಾನಿಗಳ ನೆರವಿನಿಂದ ರೂ 61,995 ರೂ ಮೊತ್ತ ಸಂಗ್ರಹವಾಗಿದ್ದು ದೈವಸ್ಥಾ‌ನದ ಮುಂಭಾಗದಲ್ಲಿ ಮಾಣಿಗುತ್ತು ಸಚಿನ್ ರೈಗಳು ಅಂಧಕಲಾವಿದರಿಗೆ ನಿಧಿ ಹಸ್ತಾಂತರಿಸಿದರು.

vtv vitla
vtv vitla
- Advertisement -

Related news

error: Content is protected !!