- Advertisement -
- Advertisement -


ವಿಟ್ಲ: ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಬಗ್ಗೆ ದೈವಜ್ಞರ ಮುಖೇನ ಪ್ರಶ್ನಾಚಿಂತನೆ ನಡೆಸಿದಾಗ ಗೋಚರಿಸಿದ ಕೆಲವು ವಿಷಯಗಳ ಪರಿಹಾರಾದಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಶ್ರೀ ದೇವರ ಸಾನ್ನಿಧ್ಯ ವೃದ್ಧಿಗಾಗಿ ಶತರುದ್ರಾಭಿಷೇಕ ಸೇವೆ ಇಂದು (ಡಿ. 9ರಂದು) ನಡೆಯಲಿದೆ.
9-12-2021ರ ಗುರುವಾರದಂದು ಸುಬ್ರಮಣ್ಯ ಷಷ್ಠಿ ದಿನದಂದು ಬೆಳಗ್ಗೆ 9.00 ರಿಂದ ಶತರುದ್ರ ಪ್ರಾರಂಭವಾಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



- Advertisement -








