Sunday, May 5, 2024
spot_imgspot_img
spot_imgspot_img

ವಿಟ್ಲ: ಗುಡ್ಡದಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

- Advertisement -G L Acharya panikkar
- Advertisement -

ವಿಟ್ಲ : ಗುಡ್ಡಪ್ರದೇಶದ ಹೊಂಡದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಅಸ್ಥಿ ಪಂಜರದ ಗುರುತು ಪತ್ತೆಯಾಗಿದೆ.

ಮೃತಪಟ್ಟವರನ್ನು ಪುಣಚ ಗ್ರಾಮದ ಕೆದುಮೂಲೆ ದಿ.ವೀರಪ್ಪ ನಾಯ್ಕ್‌ರವರ ಪುತ್ರ ಕಮಲಾಕ್ಷ (28 ವ.)ಎಂದು ಮನೆಯವರು ಗುರುತು ಪತ್ತೆಹಚ್ಚಿದ್ದಾರೆ.

ಘಟನೆಯ ವಿವರ:

ಪುಣಚದ ಗ್ರಾಮದ ಅಜೇರು ನೆಲ್ಲಿಗುಡ್ಡೆ ಜರಿಮೂಲೆ ಎಂಬಲ್ಲಿ ಡಿ.21ರಂದು ಸೊಪ್ಪು , ಸೌದೆ ತರಲು ಗುಡ್ಡಕ್ಕೆ ತೆರಳಿದ್ದ ಸ್ಥಳೀಯ ನಿವಾಸಿಗಳಿಗೆ ಒಂದು ಮೊಬೈಲ್ ಫೋನ್ ಹಾಗೂ ಬ್ಯಾ ಗ್ ಕಂಡುಬಂದಿತ್ತು . ಅಲ್ಲಿಂ ದ ಅಲ್ಪ ದೂರದಲ್ಲಿ ವ್ಯ ಕ್ತಿಯೋರ್ವರ ಅಸ್ಥಿ ಪಂಜರ ಪತ್ತೆಯಾಗಿದ್ದು, ಮರವೊಂದರಲ್ಲಿ ಹಗ್ಗವೊಂದು ನೇತಾಡುತ್ತಿರುವುದು ಕಂಡು ಬಂದಿದ್ದು. ವಿಟ್ಲ ಠಾಣಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿರುವ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಪತ್ತೆಯಾಗಿರುವ ಮೃತದೇಹ ಪುಣಚ ಗ್ರಾಮದ ಕೆದುಮೂಲೆ ದಿ.ವೀರಪ್ಪ ನಾಯ್ಕ್ ರವರ ಪುತ್ರ ಕಮಲಾಕ್ಷರವರದೆಂದು ಮೃತರ ಸಂಬಂಧಿಕರು ಗುರುತು ಪತ್ತೆ ಹಚ್ಚಿದ್ದಾರೆ.

ಮನೆಯಿಂದ ಕೆಲಸಕ್ಕೆಂದು ತೆರಳಿದರೆ ಹಲವು ದಿನಗಳವರೆಗೆ ಕಮಲಾಕ್ಷ ಮರಳಿ ಮನೆಗೆ ಬರುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಕಮಲಾಕ್ಷ ಮತ್ತೆ ಕೆಲಸಕ್ಕೆ ತೆರಳಿದ್ದರು ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!