Thursday, April 25, 2024
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಇದರ 2021-2022 ನೇ ಸಾಲಿನ ವಾರ್ಷಿಕ ಮಹಾಸಭೆ; 557.92 ಕೋಟಿ ರೂಪಾಯಿಗಳ ವ್ಯವಹಾರ – 2ಕೋಟಿ 26 ಲಕ್ಷಕ್ಕೂ ಅಧಿಕ ಲಾಭ

- Advertisement -G L Acharya panikkar
- Advertisement -
astr

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಇದರ 2021-2022 ನೇ ಸಾಲಿನ ವಾರ್ಷಿಕ ಮಹಾಸಭೆಯು 22-09-2022 ನೇ ಗುರುವಾರ ವಿಟ್ಲದ ಶಾಂತಿನಗರದಲ್ಲಿರುವ “ಅಕ್ಷಯ ಸಮುದಾಯ ಭವನ’ ದಲ್ಲಿ ಬ್ಯಾಂಕಿನ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿವುದರ ಮೂಲಕ ಉದ್ಘಾಟನೆಯನ್ನ ಮಾಡಿ ಸ್ಥಾಪಕಾಧ್ಯಕ್ಷರಾದ ದಿ.ವೆಂಕಪ್ಪಯ್ಯ, ಉರಿಜಲು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ವೇದಿಕೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷ ಮೋಹನ್ ಕೆ.ಎಸ್, ಬ್ಯಾಂಕ್‌ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣ ಮರಳಿ ಶ್ಯಾಮ್ ಕೆ. ಹಾಗೂ ನಿರ್ದೇಶಕರುಗಳಾದ ಎಂ ಹರೀಶ್ ನಾಯಕ್, ಮನೋರಂಜನ್ ಕೆ.ಆರ್‍, ವಿಶ್ವನಾಥ ಎಂ, ಶ್ರೀಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮೀ., ಜಯಂತಿ ಎಚ್.ರಾವ್ ಉಪಸ್ಥಿತರಿದ್ದರು.

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2021-2022ನೇ ಸಾಲಿನಲ್ಲಿ557.92 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ ರೂಪಾಯಿ 2,26,62,875.65 ಲಾಭವನ್ನು ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ “ಎ” ಗ್ರೇಡ್‌ನಲ್ಲಿ ಮುನ್ನಡೆಯುತ್ತಿದೆ.

ಮಹಾಸಭೆಯಲ್ಲಿ ನಿರ್ದೇಶಕ ಗೋವರ್ಧನ ಕುಮಾರ್ ಐ ಅವರು ಹಿಂದಿನ ಮಹಾಸಭೆಯ ನಡವಳಿಕೆಯನ್ನು ಓದಿ ದಾಖಲು ಮಾಡಲಾಯಿತು. ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣ ಮರಳಿ ಶ್ಯಾಮ್ ಕೆ. ಅವರಿಂದ 2021-2022ನೇ ಸಾಲಿನ ಆಡಳಿತ ಮಂಡಳಿ ವರದಿ ಮಂಜೂರಾತಿ, ಲೆಕ್ಕ ಪರಿಶೋಧನಾ ವರದಿ ಮಂಜೂರು, ನಿವ್ವಳ ಲಾಭ ವಿಂಗಡನೆ, ಆಯ-ವ್ಯಯಗಿಂತ ಜಾಸ್ತಿ ಖರ್ಚಾದ ವೆಚ್ಚ ಮಂಜೂರು ಹಾಗೇ 2021-2023 ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಮಂಜೂರಾತಿ, 2021-2023ನೇ ಸಾಲಿಗೆ ಬ್ಯಾಂಕಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕ ಹಾಗೂ ಇತರ ವಿಷಯಗಳ ಮಂಡನೆ ನಡೆಯಿತು.

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ಇದರ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಸ್ವಾಗತ ಭಾಷಣ ಮಾಡಿದರು. ಬಿ.ಸಿರೋಡ್ ಶಾಖೆಯ ಸಿಬ್ಬಂದಿ ಶ್ರೀನಿಧಿ ಪ್ರಾರ್ಥಿಸಿದರು. ನಿರ್ದೇಶಕ ವಿಶ್ವನಾಥ ಧನ್ಯವಾದ ಅರ್ಪಿಸಿದರು.

- Advertisement -

Related news

error: Content is protected !!