- Advertisement -
- Advertisement -
ವಿಟ್ಲ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್.ಎಲ್.ವಿ ಗ್ರೂಪ್ ನ ಮಾಲಕರಾದ ದಿವಾಕರ್ ದಾಸ್ ನೆರ್ಲಾಜೆ ಅವರು ಪುಸ್ತಕ ದಾನಮಾಡಿದರು. ದಿವಾಕರ್ ದಾಸ್ ಅವರು ಚಂದಳಿಕೆ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರತಿವರ್ಷವೂ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಅಲ್ಲದೆ ತಾನು ಕಲಿತ ಶಾಲೆಯಲ್ಲಿ ಕಟ್ಟಡದ ನಿರ್ಮಾಣವನ್ನು ಮಾಡುತ್ತ ಬಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಭವಾನಿ ಟೀಚರ್ ಕೊಲ್ಯ, ಮಾಜಿ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ವಿಟ್ಲ, ದೇಜಪ್ಪ ಪೂಜಾರಿ, ನವಭಾರತ್ ಶಾಮಿಯಾನದ ಇದರ ಮಾಲಕ ಸಂಜೀವ ಪೂಜಾರಿ, ವಾಸುದೇವ, ವಿಶ್ವನಾಥ ಮಾಸ್ಟರ್ ಉಪಸ್ಥಿತರಿದ್ದರು.
- Advertisement -