Sunday, May 19, 2024
spot_imgspot_img
spot_imgspot_img

ವಿಟ್ಲ : ಜೇಸಿಐಯಿಂದ ಕನ್ಯಾನದ ಭಾರತ ಸೇವಾಶ್ರಮಕ್ಕೆ ಅಕ್ಕಿ ದೇಣಿಗೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಜೇಸಿಐ ವಿಟ್ಲದ ಜೇಜೆಸಿ ವಿಂಗ್ ನಿಂದ ನಿನ್ನೆ ಕನ್ಯಾನದ ಭಾರತ ಸೇವಾಶ್ರಮಕ್ಕೆ ಭೇಟಿ ನೀಡಿ ಜೇಜೇಸಿ ಗಳಿಂದ ಅಕ್ಕಿ ದೇಣಿಗೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜೇಸಿಐ ವಿಟ್ಲದ ಜೇಜೇಸಿ ವಿಂಗ್ ಅಧ್ಯಕ್ಷೆ ಜೇಜೇಸಿ ಖುಷಿ ರೈ ಸಭಾಧ್ಯಕ್ಷತೆ ವಹಿಸಿದರು. ಜೇಜೇಸಿ ತೇಜಸ್ ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಸೇವಾ ಆಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಆಶ್ರಮದ ಪ್ರಾರಂಭದಿಂದ ಇಂದಿನವರೆಗಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜೇಜೇಸಿ ಸದಸ್ಯರು ಆಶ್ರಮದ ಮಕ್ಕಳೊಂದಿಗೆ ಅಕ್ಕಿ ಚೀಲ ಹಸ್ತಾಂತರಿಸಿದರು. ಜೇಜೇಸಿ ಚರಿತ್ ಅಮೀನ್ ಕೆ ವಂದಿಸಿದರು.ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರು, ಜೇಸಿ ಸದಸ್ಯರು, ಲೇಡಿ ಜೇಸಿ ಹಾಗೂ ಜೇಜೇಸಿಗಳು ಭಾಗವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಜೀಜೇಸಿ ಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಗಳು ನಡೆದವು. ಪುಟಾಣಿಗಳು ಆಶ್ರಮದ ಮಕ್ಕಳೊಂದಿಗೆ ಹಾಗೂ ವೃದ್ದರೊಂದಿಗೆ ಬೆರೆತು ಅವರ ಮನಸ್ಸಿಗೆ ಉತ್ಸಾಹ ನೀಡಿದರು. ಮಕ್ಕಳಿಂದಲೇ ಅಕ್ಕಿ ವಿತರಣೆ ಮಾಡಿಸಿ ಅವರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವುದು ಜೇಜೇಸಿ ಅಧ್ಯಕ್ಷರಾದ ಖುಷಿ ರೈ ಇವರ ಮನದ ಉದ್ದೇಶ ಶ್ಲಾಘನೀಯ. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ಮಾನವ ಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬುದನ್ನು ತೋರಿಸಿಕೊಟ್ಟ ಜೇಜೇಸಿ ಅಧ್ಯಕ್ಷೆ ಖುಷಿ ರೈ ಇವರಿಗೆ ಧನ್ಯವಾದಗಳು.

- Advertisement -

Related news

error: Content is protected !!