- Advertisement -
- Advertisement -
ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಶ್ರೀ ಕ್ಷೇತ್ರ ಕಟ್ಟತ್ತಿಲ ಶ್ರೀ ಮಹಾಮ್ಮಾಯಿ ದೇವಿಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ “ನಮ್ಮ ನಡಿಗೆ.. ಅಮ್ಮನವರ ಕಡೆಗೆ” ಬೃಹತ್ ವಾಹನ ಜಾಥಾವು ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಇವರ ನೇತೃತ್ವದಲ್ಲಿ ಡಿ.11ರಂದು ನಡೆಯಲಿದೆ.
ಡಿ.11ರಂದು ಮಧ್ಯಾಹ್ನ 2.30ರಿಂದ ಸಾಲೆತ್ತೂರು ಬಸ್ ನಿಲ್ದಾಣದಿಂದ ಶ್ರೀ ಕ್ಷೇತ್ರ ಕಟ್ಟತ್ತಿಲಕ್ಕೆ ಬೃಹತ್ ವಾಹನ ಜಾಥಾವು ನಡೆಯಲಿದೆ. ಸಂಜೆ 3.00ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರೆ.
- Advertisement -