Sunday, April 28, 2024
spot_imgspot_img
spot_imgspot_img

ವಿಟ್ಲ: ತುಳು ನಾಟಕೋತ್ಸವ – ನಾಟಕ ಸ್ಪರ್ಧೆ

- Advertisement -G L Acharya panikkar
- Advertisement -

ಒಡಿಯೂರು: ದಶಂಬರ 1ರಿಂದ 7ರ ತನಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗುವ ಶ್ರೀ ದತ್ತ ಜಯಂತಿ ಮಹೋತ್ಸವದ ಸುಸಂದರ್ಭ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ತುಳು ನಾಟಕೋತ್ಸವ – ನಾಟಕ ಸ್ಪರ್ಧೆ ನಡೆಯಲಿದೆ.

ಬಹುಮಾನಗಳು:
ಪ್ರಥಮ : 30,000, ದ್ವೀತಿಯ : 20,000, ತೃತೀಯ : ರೂ. 10,000 ಹಾಗೂ ಶಾಶ್ವತ ಫಲಕಗಳು. ಅತ್ಯುತ್ತಮ ನಟ, ನಟಿ, ಮೋಷಕ ಪಾತ್ರ, ಸಂಗೀತ ನಿರ್ದೇಶಕ, ರಂಗ ನಿರ್ಮಾಣ, ನಿರ್ದೇಶಕ, ಉತ್ತಮ ಕೃತಿಗೆ, ವೇಷ ಭೂಷಣಕ್ಕೆ ಬಹುಮಾನ ಇದೆ.

ನಿಯಮಗಳು:

1) ನೈತಿಕ ಮೌಲ್ಯಯುಕ್ತ, ಸಂದೇಶ ಭರಿತ ಯಾವುದೇ ಕಥಾವಸ್ತುವನ್ನು ಆಧರಿಸಿದ ಕೃತಿಯಾಗಿರಬೇಕು.
2) ಸಾಮಾಜಿಕ, ಪೌರಾಣಿಕ, ಜಾನಪದ, ಚಾರಿತ್ರಿಕ, ಕಾಲ್ಪನಿಕ ಯಾವುದೇ ಸ್ವರೂಪದಲ್ಲಿರಬಹುದು.
3) ಪ್ರದರ್ಶನದ ಅವಧಿ ಕನಿಷ್ಟ 1.30 – ಗರಿಷ್ಟ 2.00 ಗಂಟೆ.
4) ಪ್ರವೇಶ ಪತ್ರ ಕಳುಹಿಸಲು ಕೊನೆಯ ದಿನಾಂಕ: 31-10-2022
5) ಪೂರ್ವಮುದ್ರಿತ ಸಂಭಾಷಣೆ, ಸಂಗೀತ ಬಳಸಬಹುದು. ೧) ಪ್ರವೇಶ ದೃಢೀಕರಣ ಶುಲ್ಕ – ರೂ. 2000/- (ಹಿಂತಿರುಗಿಸಲಾಗುವುದು)

ವ್ಯವಸ್ಥೆ:
ವೇದಿಕೆ; 30×25 feet. ಸಾಮಾನ್ಯ ಧ್ವನಿ, ಬೆಳಕು ವ್ಯವಸ್ಥೆ ಇದೆ. ಹೆಚ್ಚುವರಿ ಬೇಕಿದ್ದಲ್ಲಿ ತಂಡವೆ ಹೊಂದಿಸಬೇಕು. ಅಂಕದ ಪರದೆ, ಎರಡು ಕಣ್ಣು/ನೀಲಿ ಪರದೆ ಮಾತ್ರ ಇರುತ್ತದೆ. ಊಟೋಪಚಾರ ವ್ಯವಸ್ಥೆ ಕ್ಷೇತ್ರದ ವತಿಯಿಂದ ಇದೆ.

ಆಸಕ್ತ ತಂಡಗಳು ತಮ್ಮ ನಾಟಕ ಹಾಗೂ ತಂಡಗಳ ಪೂರ್ಣ ವಿವರದೊಂದಿಗೆ ಪ್ರವೇಶ ಅಪೇಕ್ಷಾ ಪತ್ರವನ್ನು ತಾ.31-10-2022 ಮುಂಚಿತವಾಗಿ ಕಳುಹಿಸಬೇಕು. 9ರಿಂದ 10 ನಾಟಕಗಳನ್ನು ಆಯ್ಕೆಮಾಡಿ, ಪ್ರದರ್ಶನದ ದಿನ – ಸಮಯ ನಿಗದಿ ಮಾಡಲಾಗುವುದು.

ವಿಳಾಸ: ಪ್ರಧಾನ ಸಂಚಾಲಕರು, ಒಡಿಯೂರು ತುಳು ನಾಟಕೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಬಂಟ್ವಾಳ ತಾಲೂಕು, ದ.ಕ. – 574213. ಹೆಚ್ಚಿನ ಮಾಹಿತಿಗಾಗಿ:: ಕದ್ರಿ ನವನೀತ ಶೆಟ್ಟಿ – 9448123061 / ಸಂತೋಷ್ ಭಂಡಾರಿ – 9480760799

- Advertisement -

Related news

error: Content is protected !!