Thursday, April 25, 2024
spot_imgspot_img
spot_imgspot_img

ವಿಟ್ಲ: ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಸಮಾಜ ಬಾಂಧವರ ಸಾಮರಸ್ಯ ಕಾರ್ಯಕ್ರಮ “ತುಡರ್ ಪರ್ಬ”

- Advertisement -G L Acharya panikkar
- Advertisement -

ವಿಟ್ಲ: ದೀಪಾವಳಿ ಹಬ್ಬದ ಪ್ರಯುಕ್ತ ಸಜೀಪ ಕೆಂಜಿಲ ಪದವು ಹಿಂದೂ ಸಮಾಜ ಬಾಂಧವರ ಸಾಮರಸ್ಯ ಕಾರ್ಯಕ್ರಮ “ತುಡರ್ ಪರ್ಬ” ದಿನಾಂಕ 24-10-2022ನೇ ಸೋಮವಾರದಂದು ಸಜೀಪದ ಕೆಂಜಿಲ ಪದವುನಲ್ಲಿ ನಡೆಯಲಿದೆ.

ವಿಶೇಷವಾಗಿ ಈ ಕಾರ್ಯಕ್ರಮವು ಹಿಂದೂಗಳ ಸಾಮರಸ್ಯಕ್ಕಾಗಿ ನಡೆಯಲಿದ್ದು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಇಲ್ಲಿಂದ ಕೆಂಜಿಲ ಪದವಿನ ಕಾಲೋನಿಯ ಹಿರಿಯರು ಮತ್ತು ಹಿಂದೂ ಬಾಂಧವರು ಸಂಜೆ 5.00ಕ್ಕೆ ದೀಪವನ್ನು ದೇವಸ್ಥಾನ ದಿಂದ ಸ್ವೀಕಾರ ಮಾಡಿ ಅಂಬೇಡ್ಕರ್ ಭವನಕ್ಕೆ ತಲುಪಲಿದೆ, ಸರಿ ಸುಮಾರು ಸಂಜೆ 5.30ಕ್ಕೆ ದೀಪದೊಂದಿಗೆ ಶೋಭಾಯಾತ್ರೆಯು ಅಂಬೇಡ್ಕರ್ ಭವನದ ಬಳಿಯಿಂದ ಭಜನೆಯೊಂದಿಗೆ ಕೆಂಜಿಲಪದವುವಿನ ಕೊರಗಜ್ಜನ ಕಟ್ಟೆ ತಲುಪುವುದು. ನಂತರ ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹಾಗೂ ಸಜ್ಜನ ಬಂಧುಗಳ ಉಪಸ್ಥಿತಿಯೊಂದಿಗೆ ಗೋಪೂಜೆ ನಂತರ ಆಶೀರ್ವಚನ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಣಯ್ಯರವರು ವಹಿಸಿಕೊಳ್ಳುತ್ತಾರೆ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ರಾಧಕೃಷ್ಣ ಅಡ್ಯಂತಾಯ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಸಾಮೂಹಿಕ ಸಹಭೋಜನವಿದ್ದು, ಕೊನೆಯಲ್ಲಿ ದೀಪಾವಳಿಯ ಪಟಾಕಿ ಹಬ್ಬದ ಸಂಭ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಹಿಂದೂ ಬಂಧುಗಳೆಲ್ಲರೂ ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!