ಸಕ್ಕರೆ ಕಾಯಿಲೆ ಇಂದು ಜನರ ಜೀವನಶೈಲಿಗೆ ಅನುಗುಣವಾಗಿ ತುಂಬಾ ವೇಗವಾಗಿ ಹರಡುತ್ತಿದೆ. ದೇಹಕ್ಕೆ ಸರಿಯಾಗಿ ವ್ಯಾಯಾಮ ನೀಡದೆ ಅನಾರೋಗ್ಯಕರ ಆಹಾರ ಗಳನ್ನು ಮತ್ತು ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗಿ ಇರುವ ಇನ್ಸುಲಿನ್ ಸರಿಯಾಗಿ ಬಳಕೆ ಆಗದೆ ಮಧುಮೇಹಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ.
ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದುಕೊಂಡರೆ ತುಂಬಾ ಒಳ್ಳೆಯದು. ಆಯುರ್ವೇದ ತಜ್ಞರು ಹೇಳಿರುವ ಹಾಗೆ ಈ ಕೆಳಗಿನ ಎಲೆಗಳನ್ನು ಯಾವುದಾದರೂ ಒಂದು ರೂಪದಲ್ಲಿ ಪ್ರತಿದಿನ ಸೇವಿಸುವುದರಿಂದ ಮಧುಮೇಹವನ್ನು ಕಂಟ್ರೋಲ್ ಮಾಡಿಕೊಳ್ಳಬಹುದು.
ನುಗ್ಗೆ ಸೊಪ್ಪು ತನ್ನಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೇಟರಿ ಲಕ್ಷಣಗಳನ್ನು ಒಳಗೊಂಡಿರುವುದರಿಂದ ನಾವು ಅನೇಕ ಬಗೆಯ ಆರೋಗ್ಯ ಪ್ರಯೋಜನಗಳನ್ನು ಇದರಿಂದ ನಿರೀಕ್ಷಿಸಬಹುದು.
ಪ್ರಮುಖವಾಗಿ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂ ತ್ರಣ ಮಾಡುವ ಗುಣ ಪಡೆದಿದೆ. ನಮ್ಮ ದೇಹದ ಉರಿಯು ತವನ್ನು ನಿಯಂತ್ರಣ ಮಾಡುವ ಜೊತೆಗೆ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಕರಿಬೇವಿನ ಸೊಪ್ಪನ್ನು ನಾವು ಪ್ರತಿದಿನ ಅಡುಗೆಯಲ್ಲಿ ಅಥವಾ ಒಗ್ಗರಣೆ ಯಲ್ಲಿ ಬಳಸುತ್ತೇವೆ. ಹೀಗಾಗಿ ನಮಗೆ ಗೊತ್ತಿಲ್ದೆ ನಾವು ಇದರ ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇಂಪ್ಲಾಮೆಟರಿ ಗುಣಗಳನ್ನು ಪಡೆಯುತ್ತಿರುತ್ತೇವೆ.
ಇದು ಸಹ ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುವು ದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಇದರಲ್ಲಿ ನಾರಿನ ಅಂಶ ಇರಲಿದ್ದು, ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೀಬೆ ಮರದ ಎಲೆಗಳಲ್ಲಿ ಕೂಡ ನಾರಿನ ಪ್ರಮಾಣ ಮತ್ತು ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುವ ಗುಣವಿದೆ.
ಹಲವಾರು ಅಧ್ಯಯನಗಳು ಹೇಳುವ ಹಾಗೆ ಸೀಬೆ ಮರದ ಎಲೆಗಳು ನಮ್ಮ ರಕ್ತದಲ್ಲಿನ ಶುಗರ್ ಲೆವೆಲ್ ಕಡಿಮೆ ಮಾಡಿ ಇನ್ಸುಲಿನ್ ಸಮರ್ಪಕವಾಗಿ ಬಳಕೆ ಆಗುವಂತೆ ನೋಡಿ ಕೊಳ್ಳುತ್ತದೆ.
ಇವುಗಳಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಕೂಡ ಇರುವು ದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.