- Advertisement -
- Advertisement -
ವಿಟ್ಲ: ಧೂಮಾವತಿ ದೈವಸ್ಥಾನ ಅಮೈ ಪಣೆಮಜಲು ವಿಟ್ಲ ಮುಡ್ನೂರು ಇದರ ಮೊದಲನೇ ಹಂತದ ನಿವೃತ್ತಿ ಕಾರ್ಯವು ವೇದಮೂರ್ತಿ ಶ್ರೀ ರಘುರಾಮ ತಂತ್ರಿ ಕುಂಟುಕುಡೇಲು ಇವರ ನೇತೃತ್ವದಲ್ಲಿ ಗುರುವಾರ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಐಕ್ಯತಾ ಹವನ, ತ್ರಯಂಬಕ ಶಾಂತಿ, ನಿಧಿ ಕುಂಭ ಸಮರ್ಪಣೆ, ಮಧ್ಯಾಹ್ನ ಅನ್ನದಾನ ನಡೆಯಿತು.
ಈ ಕಾರ್ಯಕ್ರಮ ಧೂಮಾವತಿ ದೈವಸ್ಥಾನ ಅಮೈ ಪಣೆಮಜಲು ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ವಸಂತ ಕುಮಾರ್ ಅಮೈ, ಗೌರವಾಧ್ಯಕ್ಷರು ಕೆ.ಟಿ ವೆಂಕಟೇಶ್ವರ ನೂಜಿ, ಆಡಳಿತ ಮುಕ್ತೇಸರರು ಪ್ರಭಾಕರ ಗೌಡ ಅಮೈ, ಕಾರ್ಯದರ್ಶಿ ಜಯಾನಂದ ರೆಂಜೆಮಾರ್, ಕೋಶಾಧಿಕಾರಿ ಜಯಕರ ಅಮೈ ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -