ವಿಟ್ಲ: ನಮ್ಮ ಈ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಲಲಿತಾ ಕಲಾ ಕ್ಷೇತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಯುವ ಸಮೂಹ ಹೆಚ್ಚಾಗಿ ಸಂಗೀತ, ನೃತ್ಯ, ಹೀಗೆ ಹಲವು ಸಾಂಸ್ಕೃತಿಕ ಕ್ಷೇತ್ರದ ಕಡೆ ಹೆಚ್ಚಾಗಿ ಒಲವು ತೋರಿಸ್ತಾ ಇದ್ದಾರೆ. ಈ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕೆಂದಿದ್ದರೆ ಸ್ವಂತ ಪ್ರತಿಭೆಯ ಜೊತೆಗೆ ಉತ್ತಮ ತರಬೇತಿ ಹಾಗೂ ಕಲೆಯ ಕನಸಿಗೆ ನೀರೆರೆದು ಪೋಷಿಸುವ ಗುರುಗಳು ಕೂಡ ಅತೀ ಮುಖ್ಯ.
ಪುತ್ತೂರಿನ ಆಸು ಪಾಸಿನ ಪ್ರತಿಭೆಗಳಿಗೆ ಕಳದ 20 ವರ್ಷಗಳಿಂದ ವರದಾನವಾಗಿ ಸಿಕ್ಕ ಒಂದು ಉತ್ತಮ ಕಲಾ ತರಭೇತಿ ಕೇಂದ್ರವೇ ಗಾನಸಿರಿ ಕಲಾ ಕೇಂದ್ರ ಪುತ್ತೂರು. ಇದೀಗ ವಿಟ್ಲದ ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಕಳೆದ 20 ವರ್ಷಗಳಿಂದ 20ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಖ್ಯಾತ ಗಾಯಕ ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರ (ರಿ) ಪುತ್ತೂರು ಇದರ ವಿಟ್ಲ ಶಾಖೆ ನವೆಂಬರ್ 29 ರಂದು ಸಂಜೆ 5 ಗಂಟೆಗೆ ವಿಠಲ ಪದವಿ ಪೂರ್ವ ಕಾಲೇಜು( ಪ್ರೌಢ ಶಾಲಾ ವಿಭಾಗ) ಇಲ್ಲಿ ಶುಭಾರಂಭಗೊಳ್ಳಲಿದೆ.
ಸುಗಮ ಸಂಗೀತ, ಭಜನ್, ಚಲನಚಿತ್ರ ಗೀತೆಗಳ ಗಾಯನ, ಕೀಬೋರ್ಡ್ ಮತ್ತು ಡ್ರಾಯಿಂಗ್ ತರಗತಿಗಳು ನುರಿತ ಶಿಕ್ಷಕರಿಂದ ಪ್ರಾರಂಭಗೊಳ್ಳಲಿದೆ. ನೀವು ರಿಯಾಲಿಟಿ ಶೋಗಳಲ್ಲಿ, ಹಲವಾರು ವೇದಿಕೆಗಳಲ್ಲಿ ಮಿಂಚಬೇಕೆ..? ಹಾಗಾದ್ರೆ ಈ ಕೂಡಲೇ ದಾಖಲಾತಿ ಮತ್ತು ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹೆಸರು SPACE ವಿಟ್ಲ ಎಂದು ಟೈಪ್ ಮಾಡಿ 99015 55893 ಈ ಸಂಖ್ಯೆಗೆ ಕಳುಹಿಸಿ.