ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ದ. ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಇದರ ಸಹಕಾರದೊಂದಿಗೆ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ದಿನಾಂಕ 06/11/2022 ಭಾನುವಾರದಂದು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾಟದ ಉದ್ಘಾಟನೆಯನ್ನು ವಿಟ್ಲ ಲಯನ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಕೃಷಿಕರಾದ Ln ಸುದೇಶ್ ಭಂಡಾರಿ ಇವರು ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ವೇದಿಕೆಯಲ್ಲಿ ಹಿರಿಯ ಆಟಗಾರ ಹಾಗೂ ವಿಶ್ರಾಂತ ಉಪಪ್ರಾಂಶುಪಾಲ H ಸುಬ್ರಮಣ್ಯ ಭಟ್, ಹಾಗೂ ಉದ್ಯಮಿ ಜಗದೀಶ ಪಾಣೆಮಜಲ್ ಉಪಸ್ಥಿತರಿರುತ್ತಾರೆ.
ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲದ ಉದ್ಯಮಿ ಹಾಗೂ ದೇವತಾ ಸಮಿತಿ ವಿಟ್ಲ ಇದರ ಅಧ್ಯಕ್ಷ ರಾಧಾಕೃಷ್ಣ ನಾಯಕ್ ವಹಿಸಲಿದ್ದಾರೆ. ವೇದಿಕೆಯಲ್ಲಿ ಮೈತ್ರೆಯಿ ಗುರುಕುಲದ ವ್ಯವಸ್ಥಾಪಕರಾದ ಜಗನ್ನಾಥ ಕಾಸರಗೋಡು ಹಾಗು ಉದ್ಯಮಿಗಳಾದ MN ದಿನಕರ ಭಟ್ ಮಾವೆ, ಅರುಣ್ ವಿಟ್ಲ, ರಾಮದಾಸ ಶೆಣೈ, ವಿಟಿವಿ ನಿರ್ದೇಶಕ ರಾಮದಾಸ್ ಶೆಟ್ಟಿ ರಮೇಶ್ ವರಪ್ಪಾದೆ ಉಪಸ್ಥಿತರಿರುತ್ತಾರೆ.
ಕಣಚ್ಚೂರು ಮೆಡಿಕಲ್ ಕಾಲೇಜ್ನ ವೈದ್ಯರಾದ ಡಾ ಕಿರಣ್ ಮತ್ತು ವಿಟ್ಲ ಪೊಲೀಸ್ ಠಾಣೆಯ HC ಹಾಗೂ ಕಬಡ್ಡಿ ಆಟಗಾರ ಡ್ಯಾನಿ ಮಡಂತ್ಯಾರು ಇವರಿಗೆ ಗೌರವ ಸಮರ್ಪಣೆ ಕೂಡ ಈ ಸಂದರ್ಭ ನಡೆಯಲಿದೆ. ಆಹ್ವಾನಿತ 16 ತಂಡಗಳು ಇದರಲ್ಲಿ ಸೆಣಸಲಿದ್ದು, ಪಂದ್ಯಾಟ ಬೆಳಗ್ಗೆ 9 ಗಂಟೆಯಿಂದ ಸಂಜೆ ತನಕ ನಡೆಯಲಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಇದರ ಅಧ್ಯಕ್ಷರಾದ ತಾರನಾಥ ವಿಟ್ಲ ಇವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.