Monday, April 29, 2024
spot_imgspot_img
spot_imgspot_img

ವಿಟ್ಲ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಆರೋಪಿ ಅಬ್ದುಲ್ ರಝಾಕ್ ನ ಬಂಧನ

- Advertisement -G L Acharya panikkar
- Advertisement -

ವಿಟ್ಲ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪೆರುವಾಯಿ ನಿವಾಸಿ ಅಬ್ದುಲ್ ರಝಾಕ್ ಯಾನೆ ಪುತ್ತು(47) ಬಂಧಿತ ಆರೋಪಿ.

ಪೆರುವಾಯಿ ಗ್ರಾಮದ ಕಡೆಂಗೋಡ್ಲು ಎಂಬಲ್ಲಿರುವ ಇರುವ ಸಮಯ ಕುದ್ದುಪದವು ಕಡೆಯಿಂದ ಮುರುವ ಕಡೆಗೆ ಫಿಕ್‌ ಅಪ್‌ ವಾಹನ ಚಾಲಕನು ಕಪ್ಪು ಬಣ್ಣದ ದನ-01 ಹಾಗೂ ನಸು ಕಂದು ಬಿಳಿ ಬಣ್ಣದ ಕರು-01ನ್ನು ಹತ್ಯೆಗಾಗಿ ಎಲ್ಲಿಂದಲೋ ಹೈನುಗಾರನಿಂದ ಖರೀದಿಸಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

vtv vitla
vtv vitla

ಸ್ಥಳೀಯ ನಿವಾಸಿ ಸತೀಶ ಅವರು ನಿಲ್ಲಿಸಲು ಮುಂದದಾಗ ಚಾಲಕ ವಾಹನ ನಿಲ್ಲಿಸಿ ವಾಹನದಿಂದ ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಇಳಿಸಿ ಆರೋಪಿ ವಾಹನದೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಪೆರುವಾಯಿ ಗ್ರಾಮದ ಕಿನಿಯರಪಾಲು ನಿವಾಸಿ ಸತೀಶ್‌ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.‌
ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!