ವಿಟ್ಲ: ಯುವಕ ಮಂಡಲ (ರಿ.) ಮಾಡತ್ತಡ್ಕ ವಿಟ್ಲ ಮುಡ್ನೂರು ಇದರ ಆಶ್ರಯದಲ್ಲಿ ಮಾಡತ್ತಡ್ಕ ಶ್ರೀ ಮಲರಾಯ, ಶ್ರೀ ಮೂವರ್ ದೈವಂಗಳ ನೇಮದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾಕಾರ್ಯಕ್ರಮಗಳು, ಸಂಘದ ನೂತನ ಕಟ್ಟಡದ ಉದ್ಘಾಟನೆಯು ಫೆ. 18 ರಂದು ಜರಗಲಿದೆ.
ಶ್ರೀ ಕೃಷ್ಣಯ್ಯ ಕೆ.ವಿಟ್ಲ ಅರಮನೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರು ಸಂಜೀವ ಮಠಂದೂರು, ಪುನೀತ್ ಮಾಡತ್ತಾರು ಅಧ್ಯಕ್ಷರು, ಮಲರಾಯಿ ಸೇವಾ ಸಮಿತಿ, ಮಾಡತ್ತಡ್ಕ ಹಾಗೂ ವಿಟ್ಲ ಮುಡ್ನೂರು, ಗ್ರಾಮ ಪಂಚಾಯತ್’ನ ಸದಸ್ಯರು, ಪಿ. ಅಬ್ದುಲ್ ಕುಂಞ್ಞ ಮಾಲಕರು N.S. ಕ್ರಷರ್, ಕಂಬಳಿಮೂಲೆ, ಸಂತೋಷ್ ಜೀವನ್ ಮಾಲಕರು ಸಂತೋಷ್ ಜೀವನ್ ಕ್ರಷರ್ ಮಾಡತ್ತಡ್ಕ, ಯತೀಶ್ ಹೊಸಗದ್ದೆ ಮಾಲಕರು ವಿಜಯಲಕ್ಷ್ಮೀ ಕ್ರಷರ್ ಮಾಡತ್ತಡ್ಕ, ವಸಂತ ಮೋಹನ ಅಧ್ಯಕ್ಷರು, ಯುವಕ ಮಂಡಲ(ರಿ) ಭಾಗಿಯಾಗಲಿದ್ದಾರೆ.
ಫೆ. 18ರ ಶುಕ್ರವಾರ ಸಂಜೆ ಗಂಟೆ 5:30 ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 7:30 ಗಂಟೆಗೆ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 8:30 : ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10:30ಕ್ಕೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರ್, ಮಂಜೇಶ್ವರ ಅಭಿನಯಿಸುವ, ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ನಾಟಕ ರಚನೆ ಮತ್ತು ನಿರ್ದೇಶನ ಜೆ.ಪಿ. ತೂಮಿನಾಡು ಪುಷ್ಪರಾಜ್ ಬೊಳ್ಳಾರ್ ಮತ್ತು ರವಿ ರಾಮಕುಂಜ ಅಭಿನಯಿಸುವ ಬಂಜಿಗ್ ಹಾಕೊಡ್ಚಿ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಕಾರ್ಯಕ್ರಮದ ನೇರಪ್ರಸಾರ ವಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ