- Advertisement -
- Advertisement -
ವಿಟ್ಲ: ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಎರುಂಬು ಅಳಿಕೆ ಇಲ್ಲಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಬೊಳ್ನಾಡು ಶ್ರೀ ನಗರ ಕ್ಷೇತ್ರ ಪುನರ್ ನಿರ್ಮಾಣದ ರೂವಾರಿ ಮುಂಬೈ ಉದ್ಯಮಿ, ಕ್ಷೇತ್ರದ ಆಡಳಿತ ಮೊಕ್ತೇಸರರೂ ಆದ ಕೃಷ್ಣ ಎನ್ ಉಚ್ಚಿಲ್ ಅವರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕರಿಗೆ ಸತತ 8ನೇ ಬಾರಿಗೆ ಸುಮಾರು 2000 ಮನೆಗಳಿಗೆ ತಲಾ 5ಕೆ.ಜಿಯಂತೆ ಉಚಿತ ಅಕ್ಕಿ ವಿತರಣಾ ಕಾರ್ಯಕ್ರಮವು ದಿನಾಂಕ: 14-08-2022ನೇ ಆದಿತ್ಯವಾರದಂದು ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಎರುಂಬು ಅಳಿಕೆ ಇಲ್ಲಿ ನಡೆಯಲಿದೆ.
ವಿದ್ಯಾಭೂಷಣ್ ಹಾಡಿರುವ, ಬಾಬು ಪಿಲಾರ್ ಗೀತೆ ರಚನೆ ಮಾಡಿ, ಮಜಾಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳರವರು ಸಂಗೀತ ನಿರ್ದೇಶನ ಮಾಡಿದ ಕ್ಷೇತ್ರದ ಮೊದಲ “ಭಕ್ತಿ ಗೀತೆ ಬಿಡುಗಡೆ” ಕಾರ್ಯಕ್ರಮವು ನಡೆಯಲಿದ್ದು, ನಂತರ ಮಜಾಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮತ್ತು ವಿದುಷಿ ಕುಮಾರಿ ಯುಕ್ತ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.
- Advertisement -