- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿಯ ಮಾಣಿಲ ಶಕ್ತಿ ಕೇಂದ್ರಕ್ಕೆ ನೂತನ ಸಂಚಾಲಕರಾಗಿ ಗೀತಾನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತೀಯ ಜನತಾ ಪಾರ್ಟಿ ಮಾಣಿಲ ಗ್ರಾಮದ ಈ ಹಿಂದಿನ ಶಕ್ತಿಕೇಂದ್ರದ ಸಂಚಾಲಕರು ಮತ್ತು ಮಂಡಲ ಕಾರ್ಯಕಾರಿಣಿ ಸದಸ್ಯರೋರ್ವರು ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದ ಸಭೆಯಲ್ಲಿ ಅಶಿಸ್ತು ಮತ್ತು ಅಗೌರವ ತೋರಿದ್ದರಿಂದ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರು ಇಬ್ಬರನ್ನು ಅಮಾನತುಗೊಳಿಸಿದ್ದರು.
ಇದೀಗ ಬಾರತೀಯ ಜನತಾ ಪಾರ್ಟಿಯ ಮಾಣಿಲ ಶಕ್ತಿ ಕೇಂದ್ರಕ್ಕೆ ನೂತನ ಸಂಚಾಲಕರಾಗಿ ಗೀತಾನಂದ ಶೆಟ್ಟಿಯವರನ್ನು ಗ್ರಾಮದ ಸಭೆ ನಡೆಸಿ ಸರ್ವಾನುಮತದ ನಿರ್ಣಯದಂತೆ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ನೇಮಕ ಮಾಡಿದ್ದಾರೆ
- Advertisement -