- Advertisement -
- Advertisement -
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಡಂಬು, ಇದರ ಜಂಟಿ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮದ ನಿಮಿತ್ತ ವನಮಹೋತ್ಸವ ಕಾರ್ಯಕ್ರಮವು ಕಡಂಬು ಶಾಲೆಯ ವಠಾರದಲ್ಲಿ ನಡೆಯಿತು.
ವನಮಹೋತ್ಸವವನ್ನು ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯರ್ ಹಾಗೂ ವಿಟ್ಲ ಸಿಟಿಯ ಅಧ್ಯಕ್ಷ ಬಿ ಸಂದೇಶ ಶೆಟ್ಟಿಯವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಡಿ, ಕೋಶಾಧಿಕಾರಿ ಓ ಎ ಕೃಷ್ಣ, ಸಕ್ರಿಯ ಸದಸ್ಯರುಗಳಾದ, ಸುರೇಶ್ ಬನಾರಿ, ಸದಾನಂದ ಗೌಡ ಸೇರಾಜೆ, ದಿನಕರ್ ಆಳ್ವ, ಧರಣಪ್ಪ ಗೌಡ, ಮೋಹನ್ ಕಟ್ಟೆ, ಜಯರಾಮ್ ಬಲ್ಲಾಳ್, ಸಂತೋಷ್ , ಶ್ವೇತ ಆರ್ ಕೆ, ಮುಖ್ಯೋಪಾಧ್ಯಾಯರಾದ ಶ್ರೀರಾಮಚಂದ್ರ ನಾಯಕ್,ಎಸ್ಡಿಎಂಸಿ ಅಧ್ಯಕ್ಷರಾದ ಹಸೈನಾರ್, ಶಿಕ್ಷಕ ವೃಂದದವರು, ಶಾಲಾ ಮಕ್ಕಳು, ಪೋಷಕರು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 300ಕ್ಕಿಂತ ಅಧಿಕ ಗಿಡವನ್ನು ಹಂಚಲಾಯಿತು.
- Advertisement -