ವಿಟ್ಲ: ನವಯುಗ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಉರ್ದಿಲ, ನೆಟ್ಲಮುಡ್ನೂರು ಇವರ ತೃತೀಯ ವರ್ಷದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಕೂಟವು ದಿನಾಂಕ 03/04/2022 ಆದಿತ್ಯವಾರದಂದು ಪಟೇಲ್ ಶ್ರೀ ಕೆ. ಇಂದುಹಾಸ ರೈ ಉರ್ದಿಲಗುತ್ತು ಕ್ರೀಡಾಂಗಣ ಉರ್ದಿಲ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅಹಲ್ಯಾ ಸುನೀಲ್ ಕುಮಾರ್ ಶೆಟ್ಟಿ ಉರ್ದಿಲಗುತ್ತು, ಸತೀಶ್ ಕೊಪ್ಪರಿಗೆ, ಹರೀಶ್ ಪೂಜಾರಿ ಮುಜಾಲ, ರಮೇಶ್ ಪೂಜಾರಿ ಮುಜಾಲ, ಕುಂಞಣ್ಣ ರೈ, ಜಯಂತಿ ಹರೀಶ್, ಡಾ.ಮನೋಹರ್ ರೈ ಅಂತರಗುತ್ತು,ಚೇತನ್ ನಾಯ್ಕ್ ಮುಜಾಲ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಅತಿಥಿಗಳಾಗಿ ಸುರೇಶ್ ರೈ ಕುರ್ಲೆತ್ತಿಮಾರು, ಈಶ್ವರ ಪೂಜಾರಿ ನಡುರ್ದಿಲ, ಸಂಪತ್ ಕೋಟ್ಯಾನ್ ಕಡೇಶಿವಾಲಯ, ಗಂಗಾಧರ ಪಂಡಿತ್ ಗೋಳಿಕಟ್ಟೆ, ಸುರೇಶ್ ಪೂಜಾರಿ ಮುಜಾಲ ಭಾಗವಹಿಸಿದ್ದರು.
ಈ ಪಂದ್ಯಾಕೂಟದಲ್ಲಿ ಒಟ್ಟು 23 ತಂಡಗಳು ಭಾಗವಹಿಸಿದ್ದವು, ಪಂದ್ಯಾಕೂಟದ ಬಹುಮಾನಗಳ ವಿವರ
ಪ್ರಥಮ:: ಸತ್ಯ ದೇವತೆ ಬೊಳ್ಳಾರು, ದ್ವಿತೀಯ :: ಉದಯ ಯುವಕ ಮಂಡಲ ಶೇರಾ ತೃತೀಯ:: ನೇತಾಜಿ ಗೆಳೆಯರ ಬಳಗ, ನೇತಾಜಿನಗರ, ಚತುರ್ಥ :: ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಪೆರಾಜೆ ಇವರು ನಗದು ಮತ್ತು ನವಯುಗ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. Best Attacker:: ಚಿಂತನ್ ಶೇರಾ, Best all rounder :: ಪ್ರಶಾಂತ್ ಬೊಳ್ಳಾರು, Best setter :: ಲೋಕೇಶ್ ಬೊಳ್ಳಾರು ಪಡೆದುಕೊಂಡರು.