Saturday, April 27, 2024
spot_imgspot_img
spot_imgspot_img

ವಿಟ್ಲ: ವಿ.ಹಿ.ಪ. ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ಹಿತ ಚಿಂತಕರ ಅಭಿಯಾನ ಪ್ರಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ಹಿತ ಚಿಂತಕರ ಅಭಿಯಾನವನ್ನು ಕೃಷ್ಣಯ ವಿಟ್ಲ ಅರಮನೆಯವರಿಗೆ ನೀಡುವ ಮೂಲಕ ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಪ್ರಖಂಡ ಅಧ್ಯಕ್ಷ, ಜಿಲ್ಲಾ ಪ್ರಸಾರ ಪ್ರಚಾರ ಪ್ರಮುಖ್ ಶ್ರೀಧರ್ ತೆಂಕಿಲ, ಸಹ ಸಂಚಾಲಕ ಸಂದೀಪ್, ಅಶೋಕ್ ಮನಿಲಾ , ಉದಯ ಮಾಣಿಲ, ಸಂಜೀವ ಕುಡ್ತಮುಗೇರು, ಅನಿಲ ವಿಟ್ಲ ಇನ್ನಿತರರು ಉಪಸ್ಥಿತರಿದ್ದರು.

ಪ್ರತಿಯೊಬ್ಬ ಹಿಂದೂ ಕಾರ್ಯಕರ್ತ 20 ರೂಪಾಯಿಯ ಕೂಪನ್ ಪಡೆದುಕೊಂಡು ಈ ಸಂಘಟನೆಗೆ ಆರ್ಥಿಕ ಸಹಾಯಮಾಡಬಹುದು. ಸಮಾಜದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುವ ಸಂಘಟನೆಯ ಕಾರ್ಯಕರ್ತರ ಹಾಗೂ ಸಮಾಜದ ಬಡಕುಟುಂಬಗಳಿಗೆ ಸಹಾಯಧನ ನೀಡುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಪ್ರಾರಂಭ ಮಾಡಲಾಗಿದೆ. ಇಲ್ಲಿ ಸಂಗ್ರಹವಾದ ಮೊತ್ತ ನೇರ ವಿಭಾಗಕ್ಕೆ ಜಮೆಯಾಗಿ ಅಲ್ಲಿಂದ ಒಟ್ಟು ಸಂಗ್ರಹದ ಅರ್ಧ ಮೊತ್ತವನ್ನು ಆಯಾ ಘಟಕಗಳಿಗೆ ನೀಡಿ ಅಲ್ಲಿಂದ ಅಶಕ್ತ ಕುಟುಂಗಳಿಗೆ ನೀಡುವ ಮೂಲಕ ಬಡಕುಟುಂಗಳಿಗೆ ಸಹಾಯಾರ್ಥ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನ ಕಳೆದ ನವೆಂಬರ್ 10ರಂದು ಪ್ರಾರಂಭಗೊಂಡಿದ್ದು, ನವೆಂಬರ್ 20ರವರೆಗೆ ಅಭಿಯಾನದ ಅವಧಿ ಕೈಗೊಳ್ಳಲಾಯಿತು. ನವೆಂಬರ್ 24ರ ಒಳಗೆ ಒಟ್ಟು ಮೊತ್ತವನ್ನು ಸಂಗ್ರಹ ಮಾಡಿ ನೀಡಬೇಕೆಂದು ಜಿಲ್ಲೆಯಿಂದ ಸೂಚಿಸಲಾಗಿದೆ.

- Advertisement -

Related news

error: Content is protected !!