ವಿಟ್ಲ: ಶ್ರೀಗಾಣ ಎಂಟರ್ಪ್ರೈಸಸ್ ಇದರ ಉದ್ಘಾಟನಾ ಸಮಾರಂಭ ಹಾಗೂ ಗಾಣದ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ಉತ್ಪನ್ನಗಳ ಲೋಕಾರ್ಪಣಾ ಸಮಾರಂಭ ಕನ್ಯಾನ ಕರೋಪಾಡಿ ನೆಲ್ಲಿಕಟ್ಟೆ ಬಸ್ಸು ನಿಲ್ದಾಣ ಬಳಿ ಶುಭಾರಂಭಗೊಂಡಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ MOFPI, ಭಾರತ ಸರಕಾರ, ಆಹಾರ ವಿಜ್ಞಾನಿ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಎ ಫಝಲ್, ಕರೋಪಾಡಿ ಗ್ರಾ.ಪಂ.ಅಧ್ಯಕ್ಷ ಅನ್ವರ್ ಕರೋಪಾಡಿ, ಕನ್ಯಾನ ಗ್ರಾ.ಪಂ.ಸದಸ್ಯ ರಘುರಾಮ ಶೆಟ್ಟಿ, ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್ ದಂಬೆ, ಗೋಪಾಲ ಕುದ್ದುಪದವು, ರಾಮಕೃಷ್ಣ ಕರೋಪಾಡಿ, ಉಪಸ್ಥಿತರಿದ್ದರು.
ಲೀಲಾ ಕಮ್ಮಾಜೆ ವಂದಿಸಿ, ನಾಗೇಶ್ ಪಾಟಾಳಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾ ನವೀನ್ ಕುಮಾರ್ ದಂಪತಿಗಳ ಈ ಸಂಸ್ಥೆಯಲ್ಲಿ ಗಾಣದ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ಉತ್ಪನ್ನಗಳು ದೊರೆಯುತ್ತದೆ. ಇನ್ನು ಮುಂದೆಯೂ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಎಲ್ಲಾ ಉತ್ಪನ್ನಗಳು ಲಭ್ಯವಿರುತ್ತದೆ. ಅಂತೆಯೇ ನಿಮ್ಮದೇ ಕೊಬ್ಬರಿಯಿಂದ ಗಾಣದಲ್ಲಿ ತೆಂಗಿನ ಎಣ್ಣೆ ತೆಗೆದುಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Sri Gana Enterprises, Nellikatte, Karopady village, kanyana
8792282111 Email us: [email protected] | www.srigana.com