- Advertisement -
- Advertisement -
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ವೀರಕಂಭ ಒಕ್ಕೂಟದ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಯನ್ನು ಕಲ್ಲಡ್ಕ ವಲಯದ ಅಧ್ಯಕ್ಷರಾದ ಈಶ್ವರ ನಾಯ್ಕ, ಮೇಲ್ವಿಚಾರಕರಾದ ಸುಗುನ ಶೆಟ್ಟಿ, ಮತ್ತು ಸೇವಾ ಪ್ರತಿನಿಧಿ ರೇವತಿ ಇವರ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರ ವೀರಕಂಬ ಇಲ್ಲಿ ನಡೆಯಿತು.
ವೀರಕಂಭ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶಾಂಭವಿ ಆಚಾರ್ಯ ,ಉಪಾಧ್ಯಕ್ಷರಾಗಿ ಹರೀಶ್ ಬಂಗೇರ, ಕಾರ್ಯದರ್ಶಿಯಾಗಿ ಪದ್ಮಾವತಿ, ಜೊತೆ ಕಾರ್ಯದರ್ಶಿಯಾಗಿ ಆನಂದ, ಕೋಶಾಧಿಕಾರಿಯಾಗಿ ಪ್ರೇಮ ಆಚಾರ್ಯ, ಉಪಸಮಿತಿ ಸದಸ್ಯರಾಗಿ ಮೀನಾಕ್ಷಿ, ವೇದಾವತಿ , ಸವಿತಾ, ಪ್ರಕಾಶ್, ಯೋಗೀಶ್ ಹಾಗೂ ದಾಖಲಾತಿ ಸಮಿತಿಯ ಸದಸ್ಯರನ್ನಾಗಿ ಶೋಭಾ ,ರೇಖಾ, ರಂಜಿತಾ, ಹರಿಣಾಕ್ಷಿ, ಮಮತಾರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಕಂಭ ಒಕ್ಕೂಟದ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
- Advertisement -